ಸಾಲ ವಾಪಸ್ ಕೇಳಿದ್ದಕ್ಕೆ ಮಹಿಳೆಯ ಕೊಲೆ

ಹಾಸನ, ಮಾ.18- ಕೊಟ್ಟ ಸಾಲವನ್ನು ವಾಪಸ್ ಕೇಳಲು ಬಂದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಬೀರನಹಳ್ಳಿ ಕೆರೆ ಬಡಾವಣೆಯಲ್ಲಿ ನಡೆದಿದೆ.

ಶಶಿಕಲಾ (28) ಕೊಲೆಯಾದ ಮಹಿಳೆ.

ತೇಜು ಎಂಬುವರಿಗೆ 2 ಲಕ್ಷ ಸಾಲವನ್ನು ಶಶಿಕಲಾ ನೀಡಿದ್ದು ಸಾಲದ ಹಣ ವಾಪಸ್ ಕೊಡುವಂತೆ ಹಲವು ಬಾರಿ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಹಣ ವಾಪಸ್ ನೀಡುವುದಾಗಿ ಶಶಿಕಲಾ ಅವರನ್ನು ಮನೆಗೆ ಕರೆಸಿ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ನಂತರ ಶವವನ್ನು ಚೀಲಕ್ಕೆ ತುಂಬಿ ತೇಜು ಮತ್ತು ಆಕೆಯ ಪತಿ ರಮೇಶ್ ಪರಾರಿಯಾಗಲು ಯತ್ನಿಸಿದ್ದಾರೆ. ಕೂಡಲೇ ಸ್ಥಳೀಯರು ರೊಚ್ಚಿಗೆದ್ದು ತೇಜು ಅವರಿಗೆ ಸೇರಿದ ಆಟೋವನ್ನು ಧ್ವಂಸ ಮಾಡಿದ್ದಾರೆ.

ಶಶಿಕಲಾ ಅವರ ಪತಿ ಸೇನೆಯಲ್ಲಿ ಕೆಲಸ ಮಾಡುತ್ತಿದ್ದು , ಮಕ್ಕಳೊಂದಿಗೆ ಹಾಸನದಲ್ಲಿ ವಾಸವಿದ್ದರು. ನೆರೆಯವರೊಂದಿಗೆ ಸ್ನೇಹ ಜೀವಿಯಾಗಿದ್ದರು.

ಈ ಸಂಬಂಧ ಹಾಸನ ಬಡಾವಣೆ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ