ದೇವಾಲಯಗಳಲ್ಲಿ ಕಳವಿಗೆ ಯತ್ನಿಸಿ ವಿಫಲರಾದ ಕಳ್ಳರು

ಚನ್ನಪಟ್ಟಣ,ಮಾ,16 -ಕಳ್ಳರ ಗುಂಪು ನಗರದ ವಿವಿಧ ದೇವಾಲಯಗಳಿಗೆ ಖನ್ನ ಹಾಕಲು ಯತ್ನಿಸಿ ವಿಫಲರಾಗಿರುವ ಘಟನೆ ನಗರ ಪೆÇೀಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾತ್ರಿ 12ರ ಸುಮಾರಿನಲ್ಲಿ ಕೆಂಪೇಗೌಡ ಬಡಾವಣೆ, ಕೋದಂಡ ರಾಮಸ್ವಾಮಿ ಬಡಾವಣೆಯಲ್ಲಿರುವ ವಿವಿಧ ದೇವಾಲಯಗಳಿಗೆ ಕಳ್ಳತನ ಯತ್ನ ನಡೆಸಿ ವಿಫಲರಾಗಿದ್ದಾರೆ.

ಕೆಂಪೇಗೌಡ ಬಡಾವಣೆಯ ಗಣೇಶ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ದೇವಾಲಯದಲ್ಲಿನ ವಸ್ತುಗಳನ್ನು ಕಳವಿಗೆ ಯತ್ನಿಸಿ ವಿಫಲರಾಗಿ ನಂತರ ಅಲ್ಲಿಂದ ಕೋದಂಡರಾಮಸ್ವಾಮಿ ಬಡಾವಣೆಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯಕ್ಕೆ ನುಗ್ಗಿದ್ದಾರೆ.
ದೇವಾಲಯದ ಗಂಟೆಯನ್ನು ಬಿಚ್ಚಿ ಬಟ್ಟೆಯಲ್ಲಿ ಮುಚ್ಚಿಟ್ಟು ದೇವಾಲಯದ ವಸ್ತುಗಳನ್ನು ಕಳವು ಮಾಡಲು ಯತ್ನಿಸಿದಾಗ ದೇವಾಲಯಕ್ಕೆ ಬಂದ ದೇವಸ್ಥಾನದ ಅರ್ಚಕರನ್ನು ಕಂಡು ಕಳ್ಳರು ಕಾಲಿಗೆ ಬುದ್ದಿ ಹೇಳಿದ್ದಾರೆ.
ಈ ಪ್ರಕರಣದ ಬಗ್ಗೆ ನಗರ ಪೆÇೀಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಗರ ಪೆÇೀಲಿಸರು ಕಳ್ಳರ ಬೇಟೆಗೆ ಬಲೆ ಬೀಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ