ರೌಡಿ ಲಕ್ಷ್ಮಣನ ಕೊಲೆ ಪ್ರಕರಣ-ವಿದ್ಯಾರ್ಥಿನಿ ಸೇರಿ 6 ಮಂದಿಯ ಬಂಧನ

ASF Commander Alok Kumar taken charge as Bangalore City Law and Order Additional Commissioner of Police at Police Commissioner office in Bengaluru on Wednesday.

ಬೆಂಗಳೂರು, ಮಾ.12- ರೌಡಿ ಲಕ್ಷಣ ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಪೈಕಿ ಬಿಎ ಸೈಕಾಲಜಿ ವಿದ್ಯಾರ್ಥಿನಿ ವರ್ಷಿಣಿ (21)ಯನ್ನು ಬಂಧಿಸಲಾಗಿದೆ ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್ ತಿಳಿಸಿದ್ದಾರೆ.

ಉನ್ನತ ವ್ಯಾಸಂಗಕ್ಕಾಗಿ ಲಂಡನ್‍ಗೆ ತೆರಳಿದ್ದ ವರ್ಷಿಣಿ ಅಲ್ಲಿ ಎಂಸ್ಸಿ ಓದುತ್ತಿದ್ದಳು. ಈ ನಡುವೆ ಲಕ್ಷ್ಮಣನ ಅಕೌಂಟ್‍ನಿಂದ ವರ್ಷಿಣಿಗೆ ಹಣ ವರ್ಗಾವಣೆಯಾಗಿದೆ.

ಅಲ್ಲದೆ, ವರ್ಷಿಣಿ ಅಕೌಂಟ್‍ನಿಂದ ರೂಪೇಶ್‍ಗೆ ಹಣ ವರ್ಗಾವಣೆಯಾಗಿದ್ದು, ಯಾವ ಉದ್ದೇಶಕ್ಕಾಗಿ ಹಣ ವರ್ಗಾವಣೆಯಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಆಸ್ತಿ ವಿವಾದವೇ ಅಥವಾ ರೂಪೇಶ್-ವರ್ಷಿಣಿ ಗೆಳೆತನದಿಂದ ಈ ಕೊಲೆ ನಡೆದಿದೆಯೇ ಎಂಬುದು ಸೇರಿದಂತೆ ಪ್ರಕರಣದ ಸಮಗ್ರ ತನಿಖೆ ನಂತರವಷ್ಟೇ ಸತ್ಯಾಂಶ ಬಯಲಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ