ಅಭ್ಯರ್ಥಿಗಳಿಗೆ ಮತ್ತೊಂದು ಸಂಕಷ್ಟ: ನೀತಿ ಸಂಹಿತೆ ಉಲ್ಲಂಘಿಸುವವರ ಬಗ್ಗೆ ದೂರು ಕೊಟ್ರೆ ಶಿಕ್ಷೆ ಗ್ಯಾರಂಟಿ!

ಬೆಂಗಳೂರು: ಭಾರತದ ಚುನಾವಣಾ ಆಯೋಗವು ಮುಂಬರುವ ಲೋಕಸಭೆ ಚುಣಾವಣೆಗಾಗಿ ನಾಗರಿಕರಿಗೆ ‘ಸಿವಿಜಿಲ್‘​​ ಅಪ್ಲಿಕೇಷನ್​​ ಅನ್ನು ಪರಿಚಯಿಸುತ್ತಿದೆ. ಚುನಾವಣಾ ಮುನ್ನೆಚ್ಚರಿಕೆ ಕ್ರಮವಾಗಿ ಮತ್ತು ನೀತಿ ಸಂಹಿತೆ ಉಲ್ಲಘಿಂಸುವ ಜನಪ್ರತಿನಿಧಿಗಳ ಮಾಹಿತಿಯನ್ನು ಕಲೆಹಾಕುವ ಉದ್ದೇಶ ಇದಾಗಿದೆ.

ಲೋಕಸಭಾ ಚುನಾವಣೆ ಕುರಿತು ಚುನಾವಣಾ ಆಯೋಗ ‘ಸಿವಿಜಿಲ್​ ನಾಗರಿಕ ಅಪ್ಲಿಕೇಶನ್​‘ ಅನ್ನು ವೃದ್ಧಿಸುತ್ತಿದೆ. ‘ಸಿವಿಜಿಲ್ ಆ್ಯಪ್‘​ ಚುನಾವಣೆಯ ವೇಳೆ ನಡೆಯುವ ದುರಾಚಾರ ಕುರಿತ ಮಾಹಿತಿಯನ್ನು ಈ ಅಪ್ಲಿಕೇಶನ್​ನಲ್ಲಿ ಕಳುಹಿಸಬಹುದು‘‘ ಎಂದು ಮುಖ್ಯ ಚುನಾವಣಾ ಅಧಿಕಾರಿ ಸುನಿಲ್​ ಆರೋರಾ ಹೇಳಿದ್ದಾರೆ.

ಚುನಾವಣೆಯ ಕುರಿತಂತೆ ಜನಪ್ರತಿನಿಧಿಗಳು ನೀತಿಸಂಹಿತೆ ಉಲ್ಲಂಘಿಸಿದರೆ ನಾಗರಿಕರು ನಿಮಿಷಾರ್ಧದಲ್ಲೇ ಸಾಕ್ಷಿ ಸಮೇತ ಇದರಿಂದ ದೂರು ನೀಡಬಹುದು.

ನಾಗರಿಕರು ನೀತಿ ಸಂಹಿತೆ ಕುರಿತಾಗಿ ಫೋಟೊ, ರೆಕಾರ್ಡ್​ ಅಥವಾ ವಿಡಿಯೋವನ್ನು 2 ನಿಮಿಷಗಳಲ್ಲಿ ಸಿವಿಜಿಲ್​ ಆ್ಯಪ್​ ಮೂಲಕ ಕಳುಹಿಸಬಹುದಾಗಿದೆ.

ಇನ್ನು ಸಿವಿಜಿಲ್​ ಆ್ಯಪ್​ನಲ್ಲಿ ಲೊಕೇಷನ್​ ಮ್ಯಾಪ್​​ ಅಳವಡಿಸಲಾಗಿದ್ದು,​​ ಗಿಯೊಗ್ರಾಫಿಕ್​ ಇನ್​​ಫಾರ್ಮೇಷನ್​ ಸಿಸ್ಟಮ್​ ನಿಂದ ಕಾರ್ಯನಿರ್ವಹಿಸುತ್ತದೆ. ನಾಗರಿಕ ಕಳುಹಿಸದ ಮಾಹಿತಿಯನ್ನು ಪರಿಗಣಿಸುವ ‘ಸಿವಿಜಿಲ್​ ಆ್ಯಪ್‘ ಆತನಿಗೆ ನಿರ್ದಿಷ್ಟ ಗುರುತಿನ ಕಾರ್ಡ್​ ಮತ್ತು ನೀತಿ ಸಂಹಿತೆ ಉಲ್ಲಂಘಿಸುವ ಜನಪ್ರತಿನಿಧಿಗಳ ಮಾಹಿತಿಯನ್ನು ರವಾನಿಸುವಂತೆ ಕೋರುತ್ತದೆ.​ ಮಾತ್ರವಲ್ಲದೆ, ನಾಗರಿಕ ಕಳುಹಿಸಿದ ದೂರನ್ನು ಗೌಪ್ಯವಾಗಿಡುತ್ತದೆ.

‘ಸಿವಿಜಿಲ್​ ಆ್ಯಪ್​‘ ಅನ್ನು ದುರುಪಯೋಗ ಪಡಿಸದಂತೆ ಆ್ಯಪ್​ನಲ್ಲಿ ಇನ್​ಬ್ಯುಲ್ಟ್​ ಫೀಚರ್​​ ಅನ್ನು ಅಳವಡಿಸಲಾಗಿದೆ. ಅಲ್ಲದೆ ಇದರಲ್ಲಿ ಚುನಾವಣಾ ನೀತಿ ಸಂಹಿತೆ ಮತ್ತು ಕಾನೂನು ಉಲ್ಲಂಘನೆಯ ದೂರುಗಳನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ. ಇನ್ನು ‘ಸಿವಿಜನ್​ ಅಪ್ಲಿಕೇಶನ್‘​ ಬಳಸುವ ನಾಗರಿಕರಿಗೆ 5 ನಿಮಿಷಗಳ ಕಾಲ ಘಟನೆ ಕುರಿತಾಗಿ ಮಾಹಿತಿ ನೀಡಲು ಸಮಯ ನೀಡುತ್ತದೆ. ಅನಂತರ ಫೋಟೊ ಅಥವಾ ವಿಡಿಯೋವನ್ನು ಪ್ರಕಟಿಸಲು ಅವಕಾಶ ನೀಡಲಾಗಿದೆ. ಪ್ರಮುಖ ವಿಷಯ ಎಂದರೆ ಈ ಆ್ಯಪ್​ ಯಾವುದೇ ಹಳೇಯ ಫೋಟೊ ಮತ್ತು ವಿಡಿಯೋವನ್ನು ಅಪ್​​ಲೋಡ್​ ಮಾಡದಂತೆ ತಡೆಯುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ