ಕಬಿನಿ ಡ್ಯಾಂನಿಂದ ಪವರ್ ಕಂಪನಿಗೆ ನೀರು-ರೈತರ ಆಕ್ರೋಶ

ಮೈಸೂರು, ಮಾ.9- ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಡ್ಯಾಂನಿಂದ ರೈತರಿಗೆ ನೀರು ಕೊಡದೆ ರಾತ್ರೋರಾತ್ರಿ ವಿದ್ಯುತ್ ತಯಾರಿಕೆಗಳಿಗಾಗಿ ಪವರ್ ಕಂಪನಿಗೆ ನೀರು ಹರಿಸುತ್ತಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.

ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಎದುರಾಗುತ್ತಿರುವಾಗ ಅಲ್ಲಿ ಸ್ವಲ್ಪ ನೀರನ್ನು ರಾಜ್ಯ ಸರಕಾರ ಉಳಿಸಿಕೊಳ್ಳವುದನ್ನು ಬಿಟ್ಟು ತಮಿಳುನಾಡು ಮೂಲಕ ವಿದ್ಯುತ ತಯಾರಿಕಾ ಕಂಪನಿಗೆ ನೀರು ಬಿಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿನಿಸುತ್ತಿದ್ದಾರೆ.

ನಂಜನಗೂಡು, ಎಚ್.ಡಿ.ಕೋಟೆ, ಟಿ.ನರಸೀಪುರ, ಯಳಂದೂರು, ಕೊಳ್ಳೆಗಾಲ ಪ್ರದೇಶಗಳಲ್ಲಿ 1ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸಬೇಕಿತ್ತು ಆದರೆ ಬೇರೆ ನೀರು ಹರಿಸದೆ ಪವರ ಕಂಪನಿಯವರು ನೀಡುವ ಹಣದಾಸೆಗೆ ವಿದ್ಯುತ್ ತಯಾರಿಕೆಗೆ ನೀರು ಹರಿಸುತ್ತಿರುವುದು ಎಷ್ಟು ಸರಿ ಎಂದರು.

ಈ ಕೂಡಲೇ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ