ಸರಗಳ್ಳರಿಂದ ಮಹಿಳೆಯರ ಸರ ಅಪಹರಣ

ಬೆಂಗಳೂರು, ಮಾ.8- ಮನೆ ಮುಂದೆ ಮಹಿಳೆ ನೀರು ಹಾಕುತ್ತಿದ್ದಾಗ ಇಬ್ಬರು ಸರಗಳ್ಳರು ಬೈಕ್‍ನಲ್ಲಿ ಬಂದು 50 ಗ್ರಾಂ ಸರ ಎಗರಿಸಿರುವ ಘಟನೆ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜಯನಗರದ 14ನೆ ಮುಖ್ಯರಸ್ತೆ, ಎವಿಆರ್ ಜ್ಯುವೆಲರಿ ಶಾಪ್ ಮುಂಭಾಗದ ರಸ್ತೆ ನಿವಾಸಿ ಶ್ರೀಲತಾ ಎಂಬುವವರು ಇಂದು ಬೆಳಗ್ಗೆ ಎಂದಿನಂತೆ ಮನೆ ಮುಂದೆ ನೀರು ಹಾಕುತ್ತಿದ್ದರು.

ಈ ವೇಳೆ ಇಬ್ಬರು ಸರಗಳ್ಳರು ಬೈಕ್‍ನಲ್ಲಿ ಬಂದಿದ್ದಾರೆ. ಒಬ್ಬಾತ ಕೆಳಗಿಳಿದು ನಡೆದು ಹೋಗುವಂತೆ ನಟಿಸಿ ಶ್ರೀಲತಾ ಅವರ 50 ಗ್ರಾಂ ಸರ ಎಗರಿಸಿ ಬೈಕ್‍ನಲ್ಲಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಲಘಟ್ಟಪುರ: ನೈಸ್ ರಸ್ತೆಯ ಆಲೋಬ್ಲಾಕ್ ಕಾರ್ಖಾನೆ ಮುಂಭಾಗ ಸುಜಾತಾ ಎಂಬುವವರು ನಿನ್ನೆ ಬೆಳಗ್ಗೆ 8.30ರಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್‍ನಲ್ಲಿ ಹಿಂಬಾಲಿಸಿಕೊಂಡು ಬಂದ ಸರಗಳ್ಳರು ಸರ ಎಗರಿಸಿ ಪರಾರಿಯಾಗಿದ್ದಾರೆ.

ಸಹಾಯಕ್ಕಾಗಿ ಸುಜಾತಾ ಅವರು ಕೂಗಿಕೊಂಡರಾದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ