ನಿಯಂತ್ರಣ ತಪ್ಪಿ ಮಲಗಿದ್ದ ಎಳನೀರು ವ್ಯಾಪಾರಿ ಮೇಲೆ ಹರಿದ ವಾಹನ-ಸ್ಥಳದಲ್ಲೇ ಮೃತಪಟ್ಟ ಎಳನೀರು ವ್ಯಾಪಾರಿ

ಬೆಂಗಳೂರು, ಮಾ.8-ವಾಟರ್‍ಟ್ಯಾಂಕರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಫುಟ್‍ಪಾತ್‍ಗೆ ನುಗ್ಗಿ ಮಲಗಿದ್ದ ಎಳನೀರು ವ್ಯಾಪಾರಿ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಳೇ ಏರ್ಪೋರ್ಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೂಲತಃ ಮುಳಬಾಗಿಲು ನಿವಾಸಿಯಾದ ನಾಗರಾಜ (35) ಮೃತಪಟ್ಟ ಎಳನೀರು ವ್ಯಾಪಾರಿ.

ರಸ್ತೆ ಬದಿ ಎಳನೀರು ವ್ಯಾಪಾರ ಮಾಡುತ್ತಿದ್ದ ಈತ ಫುಟ್‍ಪಾತ್‍ನಲ್ಲೇ ಪ್ರತಿನಿತ್ಯ ಮಲಗುತ್ತಿದ್ದರು. ಅದರಂತೆ ರಾತ್ರಿ ಫುಟ್‍ಪಾತ್‍ನಲ್ಲಿ ಮಲಗಿರುವಾಗ ಮುಂಜಾನೆ 5.30ರ ಸಮಯದಲ್ಲಿ ವಾಟರ್ ಟ್ಯಾಂಕರ್ ವಾಹನವೊಂದು ನಿಯಂತ್ರಣ ತಪ್ಪಿ ಫುಟ್‍ಪಾತ್‍ಗೆ ನುಗ್ಗಿ ಮಲಗಿದ್ದ ವ್ಯಾಪಾರಿ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಈ ಬಗ್ಗೆ ಹಳೇ ಏರ್ಪೋರ್ಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ