ಮಂಡ್ಯದಿಂದ ನಿಖಿಲ್​ ಕುಮಾರಸ್ವಾಮಿ ನಿಂತ್ರೆ ಸೋಲು ಖಚಿತ; ಗುಪ್ತಚರ ಮಾಹಿತಿ

ಮಂಡ್ಯ : ನಿಖಿಲ್​ ಕುಮಾರಸ್ವಾಮಿ ರಾಜಕೀಯ ಭವಿಷ್ಯ ರೂಪಿಸಲು ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಇದಕ್ಕಾಗಿ ಮಂಡ್ಯವನ್ನು ಆಯ್ಕೆ ಮಾಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಈ ಕ್ಷೇತ್ರ ಜೆಡಿಎಸ್​ ಭದ್ರಕೋಟೆ ಜೊತೆ ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರ. ಇಲ್ಲಿಂದ ಮಗನನ್ನು ನಿಲ್ಲಿಸಿದರೆ ಸುಲಭವಾಗಿ ಗೆಲ್ಲಿಸಬಹುದು ಎಂಬ ಆಸೆಗೆ ಈಗ ತಣ್ಣೇರೆರಚಿದಂತೆ ಆಗಿದೆ. ನಿಖಿಲ್​ ಒಂದು ವೇಳೆ ಈ ಕ್ಷೇತ್ರದಲ್ಲಿ ನಿಂತರೆ ಸೋಲು ಖಚಿತ ಎನ್ನುತ್ತಿದೆ ಗುಪ್ತಚಾರ ಮಾಹಿತಿ. ಇದಕ್ಕೆ ಕಾರಣ ಸುಮಲತಾ ಅಂಬರೀಷ್​.

ಮಂಡ್ಯ ಕ್ಷೇತ್ರದ ಬಲಾ ಬಲಗಳ ವಿಚಾರ ಕುರಿತು ಸಿಎಂ ಕುಮಾರಸ್ವಾಮಿಗೆ ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಇಲ್ಲಿ ನಿಖಿಲ್​ಗೆ ಸೋಲು ಎದುರಾಗಲಿದೆ ಎನ್ನಲಾಗಿದೆ.  ಈ ವಿಚಾರ ಸಿಎಂ ನಿದ್ದೆಗೆಡಿಸಿದೆ. ಇದೇ ಕಾರಣಕ್ಕೆ ನಿಖಿಲ್ ಅವರನ್ನು ಮಂಡ್ಯದಿಂದ ಕಣಕ್ಕೆ ಇಳಿಸದೇ ಇರಲು ನಿರ್ಧರಿಸಲಾಗಿದ್ದು, ಪಕ್ಕದ ಮೈಸೂರು ಜಿಲ್ಲೆಗೆ ಕಣ್ಣು ಹಾಯಿಸಲಾಗಿದೆ ಎಂಬ ಮಾತು ಕೂಡ ಕೇಳಿ ಬಂದಿದೆ.

ಮಂಡ್ಯದಲ್ಲಿ ಈಗಾಗಲೇ ಅಂಬರೀಷ್​ ಅನುಕಂಪದ ಅಲೆ ಮೂಡಿದೆ. ಸುಮಲತಾಗೆ ರಾಜಕೀಯಕ್ಕೆ ಇಳಿಯುವಂತೆ ಪ್ರೇರಿಪಿಸಿದ್ದ ಜನ ಅವರ ಬೆನ್ನಿಗೆ ನಿಂತಿದ್ದಾರೆ. ಅವರು ಸುಲಭವಾಗಿ ಜಯ ಸಾಧಿಸಲಿದ್ದಾರೆ. ಅಲ್ಲದೇ ಕಾಂಗ್ರೆಸ್​ ನಾಯಕರನ್ನು ಈಗಾಗಲೇ ಭೇಟಿ ಮಾಡಿರುವ ಸುಮಲತಾಗೆ ಮೈತ್ರಿ ನಾಯಕರು ಪರೋಕ್ಷ ಬೆಂಬಕ ನೀಡಿದ್ದಾರೆ ಎಂದು ಕೂಡ ಹೇಳಲಾಗಿದೆ. ಇಂತಹ ಸಂದರ್ಭದಲ್ಲಿ ನಿಖಿಲ್​ ನಿಂತರೆ ಕೆಲವು ಕಷ್ಟ ಎನ್ನುತ್ತಿದೆ ಲೆಕ್ಕಾಚಾರ.

ಮಗನ ರಾಜಕೀಯ ಭವಿಷ್ಯಕ್ಕಾಗಿ ಈಗಾಗಲೇ ಅವರು ಅಲ್ಲಿ ಸಿನಿಮಾ ಚಿತ್ರೀಕರಣ, ಪ್ರದರ್ಶನ ಎಲ್ಲಾ ತಂತ್ರ ನಡೆಸಿದ್ದರು. ಅದು ಯಾವುದು ಕೂಡ ಅವರಿಗೆ ಬೆಂಬಲವಾಗುವುದಿಲ್ಲ ಎನ್ನಲಾಗಿದೆ. ಇನ್ನು ಸುಮಲತಾ ಕಾಂಗ್ರೆಸ್​ ಟಿಕೆಟ್​ ನೀಡದಿದ್ದರೂ ಪಕ್ಷೇತರವಾಗಿ ಸ್ಪರ್ಧಿಸಿದರೆ, ಅವರ ಬೆಂಬಲಕ್ಕೆ ಇಡೀ ಚಿತ್ರರಂಗವೇ ಸಕ್ಕರೆ ನಾಡಿನಲ್ಲಿ ನಿಂತು ಕೂಡ ಪ್ರಚಾರ ಹಮ್ಮಿಕೊಳ್ಳುವುದು ಕೂಡ ಖಚಿತವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ