ಅರಣ್ಯ ಅಭಿವೃದ್ಧಿಗೆ ನೆರವು-ನಟ ದರ್ಶನ್‍ರವರಿಂದ ಛಾಯಾಚಿತ್ರ ಪ್ರದರ್ಶನ

ಮೈಸೂರು, ಮಾ.1-ಬಂಡೀಪುರ ಅರಣ್ಯದಲ್ಲಿನ ಕಾಡ್ಗಿಚ್ಚಿನಿಂದ ಉಂಟಾದ ಅಪಾರ ನಷ್ಟ ಹಿನ್ನೆಲೆಯಲ್ಲಿ ಅರಣ್ಯ ಅಭಿವೃದ್ಧಿಗೆ ನೆರವು ನೀಡಲು ಇಂದು ವನ್ಯಜೀವಿ ಪ್ರಿಯ ನಟ ದರ್ಶನ್ ತಾವು ತೆಗೆದ ಛಾಯಾಚಿತ್ರ ಪ್ರದರ್ಶವನ್ನು ಏರ್ಪಡಿಸಿದ್ದರು.

ನಗರದ ಸಂದೇಶ ಹೊಟೇಲ್‍ನಲ್ಲಿ ಇಂದಿನಿಂದ 3 ದಿನಗಳ ಕಾಲ ನಡೆಯುವ ಛಾಯಾಚಿತ್ರ ಪ್ರದರ್ಶನ ಮತ್ತು ಮಾರಾಟದಿಂದ ಬರುವ ಹಣವನ್ನು ಅರಣ್ಯ ಇಲಾಖೆಗೆ ನೀಡಲು ದರ್ಶನ್ ನಿರ್ಧರಿಸಿದ್ದು ಈ ಪ್ರದರ್ಶನಕ್ಕೆ ಇಂದು ಚಾಲನೆ ನೀಡಲಾಯಿತು.

ಈ ಹಿಂದೆ ಬಂಡೀಪುರ ಅರಣ್ಯಕ್ಕೆ ಭೇಟಿ ನೀಡಿದ್ದ ವೇಳೆ ದರ್ಶನ್ ಅವರು ಸ್ವತಃ ತೆಗೆದಿದ್ದ ವನ್ಯಜೀವಿಗಳ ಮತ್ತು ಅರಣ್ಯ ಸಸ್ಯ ಸಂಕುಲಗಳ ಛಾಯಾಚಿತ್ರ ಪ್ರದರ್ಶನಗೊಂಡಿವೆ.

ಅರಣ್ಯ ಇಲಾಖೆ ಅಧಿಕಾರಿಗಳಾದ ಬಿ.ಪಿ.ರವಿ, ಸಿದ್ದರಾಮಪ್ಪ ಮತ್ತು ನಟ ದರ್ಶನ್ ಮತ್ತಿತರರು ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ