ಮಗನ ಮೇಲಿನ ಜನರ ಅಭಿಮಾನಕ್ಕೆ ಭಾವುಕರಾದ ಅಭಿನಂದನ್ ಪೋಷಕರು

ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಇಂದು ವಾಘಾ ಗಡಿ ಮೂಲಕ ಭಾರತಕ್ಕೆ ಮರಳಲಿದ್ದಾರೆ. ಅಭಿನಂದನ್ ರನ್ನು ಭಾರತಕ್ಕೆ ಹಸ್ತಾಂತರಿಸುವ ಘೋಷಣೆ ಮಾಡಿದ್ದ ಪಾಕ್ ಇಂದು ಬಿಡುಗಡೆಮಾಡುತ್ತಿದೆ.

ಇಡೀ ದೇಶವೇ ಅಭಿನಂದನ್ ಬರುವಿಕೆಗಾಗಿ ಎದುರು ನೋಡುತ್ತಿದ್ದು ವಾಘಾ ಗಡಿಯಲ್ಲಿ ಸಾಕಷ್ಟು ಜನರು ನೆರೆದಿದ್ದು ಅಭಿನಂದನ್ ರಿಗೆ ಜೈ ಹೋ ಎನ್ನುತ್ತಿದ್ದಾರೆ.

ಶತ್ರು ರಾಷ್ಟ್ರದ ವಶದಲ್ಲಿರುವ ಮಗ ಸುರಕ್ಷಿತವಾಗಿ ಹಿಂದಿರುಗಬೇಕೆಂದು ಕಾತುರದಿಂದ ಕಾಯುತ್ತಿದ್ದ ಅಭಿನಂದನ್ ಪೋಷಕರು ವಾಘಾಗಡಿಯತ್ತ ಸಾಗಿದ್ದಾರೆ.

ಅವರು ಚೆನ್ನೈ-ದೆಹಲಿ ವಿಮಾನದೊಳಗೆ ಬರುವ ವೇಳೆ ಸಹ ಪ್ರಯಾಣಿಕರು ಅಭಿನಂದನ್ ತಂದೆ-ತಾಯಿಗಳಿಗೆ ಎದ್ದುನಿಂತು ಚಪ್ಪಾಳೆ ಮೂಲಕ ಸ್ವಾಗತ ಕೋರಿದರು.

ಅಭಿನಂದನ್ ತಂದೆ ಸಿಂಹಕುಟ್ಟಿ ವರ್ತಮಾನ್ ಅವರು ನಿವೃತ್ತ ಏರ್ ಮಾರ್ಷಲ್ ಆಗಿದ್ದರು. ತಾಯಿ ಶೋಭಾ ಹಾಗೂ ಸಿಂಹಕುಟ್ಟಿ ಅವರು ವಿಮಾನದೊಳಗೆ ಬರುತ್ತಿದ್ದಂತೆ ಸಹ ಪ್ರಯಾಣಿಕರು ಎದ್ದುನಿಂತು ಅವರಿಗೆ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು.

ಮಗನ ಮೇಲೆ ಇಡೀ ದೇಶವೇ ತೋರುತ್ತಿರುವ ಅಭಿಮಾನ ಕಂಡು ತಂದೆ-ತಾಯಿಗಳು ಭಾವುಕರಾದರು.
Cheers, Claps For Pilot Abhinandan Varthaman’s Parents On Flight To Delhi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ