ಉಗ್ರರ ನೆಲೆಗಳ ಮೇಲೆ ಸರ್ಜಿಕಲ್​ ಸ್ಟ್ರೈಕ್​, 100ಕ್ಕೂ ಹೆಚ್ಚು ಟೆರರ್​​ಗಳು ಮಟ್ಯಾಷ್​: ಸರ್ಕಾರದಿಂದ ಅಧಿಕೃತ ಘೋಷಣೆ

ನವದೆಹಲಿ: ಪಾಕ್​ ಗಡಿಯಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ್ದು, 100ಕ್ಕೂ ಚ್ಚು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್​ ಗೋಖಲೆ ದೃಢಪಡಿಸಿದರು.

ಫೆಬ್ರವರಿ 14ರಂದು ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಗೆ 40ಕ್ಕೂ ಹೆಚ್ಚು ಯೋಧರು  ಹುತಾತ್ಮರಾದರು. ದಾಳಿ ನಡೆಸಿದ ಜೈಶ್​ ಎ ಮೊಹಮ್ಮದ್​ ಸಂಘಟನೆಯನ್ನು ಪಾಕಿಸ್ತಾನ ಪೋಷಿಸುತ್ತಿದೆ.  ಆದರೆ ಈ ಬಗ್ಗೆ ಪಾಕ್​ ತಳ್ಳಿಹಾಕುತ್ತಿದೆ. ಪಾಕ್​ ಹಾಗೂ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರಿಗೆ  ತರಬೇತಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಪಾಕ್​ ಗಡಿಯೊಳಗಿನ ಬಾಲಕೋಟ್​ನಲ್ಲಿ ಉಗ್ರ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ. 100ಕ್ಕೂ ಹೆಚ್ಚು ಜೈಶೆ ಮೊಹಮ್ಮದ್​   ಉಗ್ರರನ್ನು  ಹೊಡೆದರುಳಿಸಿದೆ. ಈ ಉಗ್ರರು ಪುಲ್ವಾಮದಂತಹ ಮತ್ತೊಂದು ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿದ್ದರಿಂದ ಭಾರತ ಇಂತಹ  ದಿಟ್ಟ ನಿರ್ಧಾರ ಮಾಡಿದೆ  ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ