ಕುರಿ ಬುದ್ದಿವಂತ ಪ್ರಾಣಿ-ಎಚ್.ವಿಶ್ವನಾಥ್

ಬೆಂಗಳೂರು,ಫೆ.25- ಲೋಕಸಭೆ ಚುನಾವಣೆ ಸೀಟು ಹಂಚಿಕೆ ಸಂಬಂಧ ಜೆಡಿಎಸ್-ಕಾಂಗ್ರೆಸ್ ನಾಯಕರ ನಡುವೆ ನಡೆದ ಸಭೆ ಆರಂಭದಲ್ಲೇ ಕುರಿಯ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆದು ಎಲ್ಲರನ್ನು ನಗೆಗಡಲಿನಲ್ಲಿ ತೇಲಿಸಿದ ಪ್ರಸಂಗ ನಡೆಯಿತು.

ಸಭೆಯಲ್ಲಿ ಉಪಸ್ಥಿತರಿದ್ದ ಜೆಡಿಎಸ್‍ನ ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ಕುರಿ ಬಗ್ಗೆ ಪ್ರಸ್ತಾಪಿಸಿ, ಕುರಿ ಬುದ್ಧಿವಂತ ಪ್ರಾಣಿ. ಅದನ್ನು ಮೇಯಿಸುವವರು ಬುದ್ಧಿವಂತರು ಎಂದಾಗ ಇದಕ್ಕೆ ದನಿಗೂಡಿಸಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಹೌದು ಅದರ ಬಗ್ಗೆ ನನಗೆ ಅನುಭವವೂ ಆಗಿದೆ ಎಂದರು.

ಇವರ ಸಂಭಾಷಣೆ ಆಲಿಸುತ್ತಿದ್ದ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಕೂಡಲೇ ನಿಮ್ಮಿಂದ ಈ ಮಾತನ್ನು ನಿರೀಕ್ಷೆ ಮಾಡಿದ್ದೆ ಎಂದು ಸಮಯೋಚಿತವಾಗಿ ಮಾತನಾಡಿದಾಗ ಎಲ್ಲರೂ ನಗೆಯಲ್ಲಿ ಮುಳುಗಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ