ಪ್ರಯಾಣಿಕರ ತಂಗುದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಶ್ರೀರಂಗಪಟ್ಟಣ, ಫೆ.25- ತಾಲ್ಲೂಕಿನ ಮೈಸೂರು- ಬೆಂಗಳೂರು ರಸ್ತೆ ಬದಿಯ ಕಿರಂಗೂರು ಪ್ರಯಾಣಿಕರ ತಂಗುದಾಣದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ.
ಈತ ಕೆಲದಿನಗಳ ಹಿಂದೆ ಎಲ್ಲಿಂದಲೋ ಬಂದು ಬಾಬುರಾಯನಕೊಪ್ಪಲು, ಕಿರಂಗೂರು ಹಾಗೂ ಶ್ರೀರಂಗಪಟ್ಟಣದಲ್ಲಿ ತಿರುಗಾಡಿಕೊಂಡಿದ್ದು, ರಾತ್ರಿಯ ವೇಳೆ ಕಿರಂಗೂರಿನ ಪ್ರಯಾಣಿಕರ ತಂಗುದಾಣದಲ್ಲಿ ಮಲಗುತ್ತಿದ್ದ.

ಈ ವ್ಯಕ್ತಿಗೆ ಯಾವುದೋ ಕಾಯಿಲೆಯಿಂದ ನರಳುತ್ತಿದ್ದ ಎನ್ನಲಾಗಿದ್ದು, ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿಯಾಗಿ ಚಿಕಿತ್ಸೆ ಪಡೆದ ಚೀಟಿಯಲ್ಲಿ ನಾಗರಾಜು, 49 ವರ್ಷವೆಂದು ನಮೂದಿಸಿರುವ ಚೀಟಿ ಚಿಕ್ಕಿದೆ.

ದೇಹ ಕೃಶವಾಗಿದ್ದು, ಕಪ್ಪು ತಲೆ ಕೂದಲು, ಗಡ್ಡ ಮೀಸೆ ಇದ್ದು, ಮೈಮೇಲೆ ಬಿಳಿ ಕಂದು ಗೆರೆಯುಳ್ಳ ತುಂಬು ತೋಳಿನ ಶರ್ಟ್, ನೀಲಿ ಪ್ಯಾಂಟು, ಹಸಿರು ಅಂಡರ್ ವೇರ್, ಕೆಂಪು ಲುಂಗಿ ಇರುತ್ತದೆ.

ಎತ್ತರ ಸುಮಾರು 5.3 ಅಡಿ, ಸವಕಲು ಶರೀರ, ಬಲಗೈಯಲ್ಲಿ ಗಂಡು ಬೇರುಂಡ ಚಿತ್ರ, ಬಲ ಎದೆಯ ಮೇಲೆ ಹೂವಿನ ಚಿತ್ರ, ಎಡ ಎದೆಯ ಮೇಲೆ ಪುಷ್ಪ ಎಂದು ಹಸಿರು ಹಚ್ಚೆ ಇದೆ.

ವಾರಸುದಾರರು ಯಾರದರು ಇದ್ದರೆ ಟೌನ್ ಠಾಣೆಯನ್ನು ಸಂಪರ್ಕಿಸಲು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ