ಪತ್ರಿಕೆ ಯವರು ಮತ್ತು ಟಿವಿಯವರು ನಮ್ಮ ಪರವಾಗಿ ಬರೆಯುವುದಿಲ್ಲ: ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ

ಅಂಕೋಲಾ, ಫೆ.20-ಸುದ್ದಿಗಾಗಿ ಟಿವಿ ನೋಡುವವರು ಮತ್ತು ಪತ್ರಿಕೆ ಓದುವವರಿಗೆ ತಲೆ ಸರಿ ಇರುವುದಿಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳುವ ಮೂಲಕ ಹೊಸ ವಿವಾದ ಹುಟ್ಟು ಹಾಕಿದ್ದಾರೆ.

ಅಂಕೋಲಾದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು 10 ವರ್ಷದಿಂದ ಟಿವಿ ನೋಡುವುದಿಲ್ಲ, ಪೇಪರ್ ಓದುವುದಿಲ್ಲ. ಹಾಗಾಗಿ ನನ್ನತಲೆ ಸರಿ ಇದೆ ಎಂದಿದ್ದಾರೆ.

ಪತ್ರಿಕೆ ಯವರು ಮತ್ತು ಟಿವಿಯವರು ನಮ್ಮ ಪರವಾಗಿ ಬರೆಯುವುದಿಲ್ಲ, ಅವರಿಗೆ ಬೇಕಾದ ಹಾಗೆ ಬರೆದು ಕೊಳ್ಳುತ್ತಾರೆ.ಅದಕ್ಕೆಲ್ಲ ನೀವು ತಲೆ ಕೆಡಿಸಿಕೊಳ್ಳಬೇಡಿ. ತಲೆಕೆಡಿಸಿಕೊಂಡರೆ ಆರೋಗ್ಯ ಹಾಳಾಗುತ್ತದೆ. ರಕ್ತದೊತ್ತಡ, ಶುಗರ್ ಸರಿ ಇರ ಬೇಕಾದರೆ ಟಿವಿ ನೋಡುವುದನ್ನು, ಪತ್ರಿಕೆ ಓದುವುದನ್ನು ಬಿಡಿ ಎಂದು ಅವರು ಸಲಹೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ