ಭಯೋತ್ಪಾದಕರಿಗೆ ಕೇಂದ್ರ ಸರ್ಕಾರ ತಕ್ಕ ಪಾಠ ಕಲಿಸಬೇಕು: ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ

ಬೆಂಗಳೂರು,ಫೆ.17- ಜಮ್ಮು ಕಾಶ್ಮೀರದಲ್ಲಿ ಆತ್ಮಾಹುತಿ ದಾಳಿಗೆ ಒಳಗಾಗಿ ಹುತಾತ್ಮರಾದ 44 ಯೋಧರಿಗೆ ಪೇಜಾವರ ಮಠದ ಹಿರಿಯ ಸ್ವಾಮೀಜಿ ವಿಶ್ವೇಶ ತೀರ್ಥ ಸ್ವಾಮೀಜಿ ಯೋಧರಿಗೆ ಚಿರಶಾಂತಿ ಕೋರಿದ್ದಾರೆ .

ಉಗ್ರರ ಕೃತ್ಯದಿಂದ ಇಂದು ಇಡೀ ದೇಶವೇ ದುಃಖದಲ್ಲಿದೆ . ವೀರ ಮರಣ ಹೊಂದಿದ ಅವರ ಆತ್ಮಗಳಿಗೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಸ್ವಾಮೀಜಿ ಹೇಳಿದರು.

ದೇಶಕ್ಕಾಗಿ ಹೋರಾಟ ಮಾಡುವ ಸೈನಿಕ ಯೋಗಿಯಷ್ಟೇ ಸಮಾನ. ಯೋಗಿ ಹೇಗೆ ಸದ್ಗತಿ ಹೊಂದಿ ಮುಕ್ತಿ ಹೊಂದುತ್ತಾನೋ ಅದೇ ರೀತಿ ಈ ಯೋಧರಿಗೂ ಸದ್ಗತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ .

ಕೇಂದ್ರ ಸರಕಾರ ಆ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಲಿ, ಆದರೆ ಯುದ್ದಕ್ಕೆ ಆಹ್ವಾನ ಕೊಡುವಂತಿರಬಾರದು ಎಂದು ಮನವಿ ಮಾಡಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ