ಬೇರೆಯವರ ಮೇಲೆ ಗೂಬೆ ಕೂರಿಸುವುದು ಸರಿಯಿಲ್ಲ: ಶಾಸಕ ಡಾ.ಆಶ್ವತ್ಥನಾರಾಯಣ

ಬೆಂಗಳೂರು, ಫೆ.14- ಕಾಂಗ್ರೆಸ್-ಜೆಡಿಎಸ್‍ನಲ್ಲಿನ ಆಂತರಿಕ ಗೊಂದಲದಿಂದಾಗಿ ಅತೃಪ್ತ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಆದರೆ, ಬೇರೆಯವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಬಿಜೆಪಿ ಶಾಸಕ ಡಾ.ಅಶ್ವತ್ಥನಾರಾಯಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರವರ ಪಕ್ಷಗಳಲ್ಲಿ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಅತೃಪ್ತ ಶಾಸಕರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಅವರ ಪಕ್ಷಗಳಲ್ಲೇ ಗೊಂದಲಗಳನ್ನು ಇಟ್ಟುಕೊಂಡು ನಮ್ಮ ಮೇಲೆ ಏಕೆ ಗೂಬೆ ಕೂರಿಸಬೇಕೆಂದು ಪ್ರಶ್ನಿಸಿದರು.

ವೈಯಕ್ತಿಕವಾಗಿ ಶಾಸಕರೊಂದಿಗೆ ಸಂಪರ್ಕ ಇದ್ದೇ ಇರುತ್ತದೆ.ಅದಕ್ಕಾಗಿ ಬೇರೆ ಅರ್ಥ ಕಲ್ಪಿಸಬಾರದು ಎಂದರು.

ನಾನು ವೈಯಕ್ತಿಕ ಕಾರಣದಿಂದ ಕೆಲ ದಿನ ಅಧಿವೇಶನಕ್ಕೆ ಬರಲಾಗಿರಲಿಲ್ಲ. ನಿನ್ನೆಯಿಂದ ಪಾಲ್ಗೊಂಡಿದ್ದೇನೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ