ಹಾಸನ ಗಲಾಟೆಗೆ ಬಿಗ್​ ಟ್ವಿಸ್ಟ್​; ಪ್ರೀತಂ ಗೌಡ ಮನೆಗೆ ಕಲ್ಲು ತೂರಲು ಬಿಜೆಪಿಯಿಂದಲೇ ನಡೆದಿತ್ತಂತೆ ಪ್ಲಾನ್

ಹಾಸನ: ದೇವೇಗೌಡ ಹಾಗೂ ಸಿಎಂ ವಿರುದ್ಧ ಬಿಜೆಪಿ ಶಾಸಕ ಪ್ರೀತಂ ಗೌಡ ನೀಡಿದ್ದ ಹೇಳಿಕೆ ಹಿನ್ನಲೆ ಉಂಟಾದ ಗಲಭೆಗೆ ಈಗ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಜಿಲ್ಲೆಯ ಏಕೈಕ ಬಿಜೆಪಿ ಶಾಸಕನ ಮನೆ ಮುಂದೆ ನಿನ್ನೆ ನಡೆಸಿದ ಜೆಡಿಎಸ್​ ಪ್ರತಿಭಟನೆಯಲ್ಲಿ ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತ ಎಂಬುದು ತಿಳಿದುಬಂದಿದೆ. ಅಲ್ಲದೇ ಬಿಜೆಪಿಯೇ ಈ ಗಲಾಟೆಗೆ ಪ್ರಚೋಚನೆ ನೀಡಿತು ಇದು ಯೋಜನೆ ಪ್ರಕಾರ ನಡೆದ ಗಲಭೆ ಎಂಬುದು ಬೆಳಕಿಗೆ ಬಂದಿದೆ.

ಶಾಸಕನ ಮನೆ ಮುಂದೆ ಪ್ರತಿಭಟನೆ ನಡೆಸಲು ಬಿಜೆಪಿಯೇ ಪ್ಲಾನ್​ ಮಾಡಿತು. ಅಲ್ಲದೇ ಜೆಡಿಎಸ್​ ಕಾರ್ಯಕರ್ತರು ಗಲಾಟೆ ಮಾಡಲು ಶಾಸಕರ ಬೆಂಬಲಿಗರು ಆಮಿಷ ಒಡ್ಡಿದ್ದರು ಎನ್ನಲಾಗಿದೆ.

ಆಡಿಯೋ ಪ್ರಕರಣದಿಂದ ಮುಜುಗರಕ್ಕೆ ಉಂಟಾಗಿದ್ದ ಬಿಜೆಪಿ ಈ ಘಟನೆಯನ್ನು ತಮ್ಮ ಲಾಭಾಕ್ಕೆ ಬಳಸಿಕೊಳ್ಳುವ ಉದ್ದೇಶದಿಂದ ಬಿಜೆಪಿ ಶಾಸಕನ ಮನೆ ಮುಂದೆ ಪ್ರತಿಭಟನೆಗೆ ಮುಂದಾಗಿದ್ದರು. ಇದಕ್ಕಾಗಿ ಜೆಡಿಎಸ್​ನ ಕಾರ್ಯಕರ್ತರ ನಡುವೆ ನಿಂತು ಕಲ್ಲು ತೂರಾಟ ನಡೆಸುವಂತೆ ಒತ್ತಾಯಿಸಿದ್ದರು. ಈ ಕುರಿತು ಆಡಿಯೋ ಸಂಭಾಷಣೆ ಲಭ್ಯವಾಗಿದ್ದು.  ಈ ಆಡಿಯೋ ಸಂಭಾಷಣೆಯನ್ನು ಇದೀಗ ಬಿಡುಗಡೆ ಮಾಡಲು ಜೆಡಿಎಸ್​ ಮುಂದಾಗಿದೆ. ಇಂದು ಮಧ್ಯಾಹ್ನ ಪ್ರೆಸ್​ ಕ್ಲಬ್​ನಲ್ಲಿ ಇದನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.  ಈ ಮೂಲಕ ಬಿಜೆಪಿ ಶಾಸಕನಿಗೆ ಮತ್ತೊಮ್ಮೆ ಕಂಟಕ ಎದುರಾಗಿದೆ.

ಪ್ರೀತಂಗೌಡ ಮನೆ ಮುಂದೆ ಜೆಡಿಎಸ್​ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಮರಳುವಾಗ ಈ ಹಲ್ಲೆ ಪ್ರಕರಣ ನಡೆದಿದೆ.  ಹಲ್ಲೆಗೆ ಒಳಗಾಗಿದ್ದ ರಾಹುಲ್​ ಕಿಣಿ ಬಿಜೆಪಿ ಕಾರ್ಯಕರ್ತ ಎಂಬ ಸುದ್ದಿಕೂಡ ಈಗ ಹೊರಬಿದ್ದಿದೆ.

ನಾಪತ್ತೆಯಾದ ಗಾಯಾಳು
ನಿನ್ನೆ ಘಟನೆಯಲ್ಲಿ ಹಲ್ಲೆಗೆ ಒಳಗಾದ ಗಾಯಾಳು ರಾಹುಲ್​ ಕಿಣಿ, ಅಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ತಡರಾತ್ರಿ 12.30 ಕ್ಕೆ ಆಸ್ಪತ್ರೆಯಿಂದ ಬೆಂಗಳೂರಿಗೆ ಆಸ್ಪತ್ರೆಗೆ ಸ್ಥಳಾಂತರಗೊಳ್ಳುವಂತೆ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಸೂಚನೆ ನೀಡಿದ್ದರು.

ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದರು ಕೂಡ  ಆತ ಆ ಆಸ್ಪತ್ರೆಗೆ ದಾಖಲಾಗಿಲ್ಲ . ಅಲ್ಲದೇ ಬೆಂಗಳೂರಿನ ಯಾವುದೇ ಆಸ್ಪತ್ರೆಯಲ್ಲಿ ಈತ ದಾಖಲಾಗಿಲ್ಲ ಎಂಬುದು ತಿಳಿದುಬಂದಿದೆ. ಆತ ಎಲ್ಲಿದ್ದಾನೆ ಎಂಬುದು ಕೂಡ ತಿಳಿದು ಬಂದಿಲ್ಲ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ