ದೇವೆಗೌಡರ ಬಗ್ಗೆ ಶಾಸಕ ಪ್ರೀತಂಗೌಡ ಲಘುವಾಗಿ ಮಾತನಾಡಿರುವುದು ತಪ್ಪು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

ಬೆಂಗಳೂರು, ಫೆ.14-ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರ ಬಗ್ಗೆ ಬಿಜೆಪಿ ಶಾಸಕ ಪ್ರೀತಂಗೌಡ ಅಭಿಮಾನ ಪಡುವ ಬದಲು ಲಘುವಾಗಿ ಮಾತನಾಡಿರುವುದನ್ನು ಬಿಜೆಪಿ ಹಿರಿಯ ನಾಯಕರು ಖಂಡಿಸಬೇಕಿತ್ತು. ಅದರ ಬದಲು ಶಾಸಕರ ಪರ ವಹಿಸಿ ಮಾತನಾಡುವುದು, ಅವರ ಪರವಾಗಿ ಸಮರ್ಥಿಸಿಕೊಳ್ಳುವುದು ನಿಜಕ್ಕೂ ದುರಂತ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಡಿದ ಅವರು, ಈ ದೇಶದ ಪ್ರಧಾನಿಯಾಗಿದ್ದವರು ಅವರು.ರಾಜಕಾರಣದಲ್ಲಿ ಉತ್ತುಂಗಕ್ಕೆ ಏರಿದವರು.ರಾಜಕೀಯದಲ್ಲಿ ಕಹಿ ಅನುಭವಗಳನ್ನು ಅನುಭವಿಸಿದ್ದಾರೆ. ಇಡೀ ದೇಶವೇ ಅವರಿಗೆ ಗೌರವ ಸಲ್ಲಿಸುತ್ತದೆ. ಹಾಸನದ ಮಣ್ಣಿನ ಮಗನಾದ ಅವರು ಪ್ರಧಾನಿಯಾಗಿದ್ದು ಅಭಿಮಾನ ತರುವಂತಹ ವಿಚಾರ. ಈ ಬಗ್ಗೆ ಹಾಸನದ ಶಾಸಕರಿಗೆ ಹೆಚ್ಚಿನ ಅಭಿಮಾನವಿರಬೇಕು.ಪಕ್ಷ ಯಾವುದೇ ಇರಲಿ, ಎಲ್ಲರೂ ಗೌರವದಿಂದ ನೋಡುತ್ತಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ