ಪಾರ್ಲಿಮೆಂಟ್‍ನ ಸಂಸತ್ ಭವನದ ಸಭಾಂಗಣದಲ್ಲಿ ಅನಾವರಣಗೊಂಡ ಮಾಜಿಪ್ರಧಾನಿ ವಾಜಪೇಯಿಯವರ ಭಾವಚಿತ್ರ

ನವದೆಹಲಿ, ಫೆ.12-ಭಾರತದ ಶಕ್ತಿ ಕೇಂದ್ರ ಪಾರ್ಲಿಮೆಂಟ್‍ನ ಸಂಸತ್ ಭವನದ ಸಭಾಂಗಣದಲ್ಲಿ ಭಾರತರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಇಂದು ಅನಾವರಣಗೊಂಡಿದೆ. ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತೈಲವರ್ಣದ ಚಿತ್ರಪಟವನ್ನು ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಟಲ್ ಅವರ ಗುಣಗಾನ ಮಾಡಿದರು.

ಅವರ ತತ್ವ-ಸಿದ್ದಾಂತ ಮತ್ತು ಆದರ್ಶಗಳು ಎಂದಿಗೂ ಆದರ್ಶಪ್ರಾಯ, ಅವರು ತಮ್ಮ ರಾಜಕೀಯ ಜೀವನದ ಸುದೀರ್ಘ ಪಯಣದಲ್ಲಿ ವಿವಿಧ ಹುದ್ದೆಗಳನ್ನೂ ಅವರ ಜನಪರ ಧ್ವನಿ ಸದಾ ಅನುಕರಣೀಯ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ