ನಾಲ್ಕು ಮನೆಗಳಗೆ ನುಗ್ಗಿದ ಕಳ್ಳರಿಂದ ಚಿನ್ನಾಭರಣ ಮತ್ತು ನಗದು ಕಳ್ಳತನ

ಕುಣಿಗಲ್,ಫೆ.12- ಕೆಎಸ್ ಆರ್‍ಟಿಸಿ ವಸತಿ ಗೃಹದಲ್ಲಿ ಕಳ್ಳರು ಸರಣಿಗಳ್ಳತನ ನಡೆಸಿದ್ದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ಕೆಎಸ್ ಆರ್‍ಟಿಸಿ ವಸತಿ ಗೃಹದ ಪ್ರದೇಶದಲ್ಲಿ ಮಧ್ಯರಾತ್ರಿ ನಾಲ್ಕು ಮನೆಗಳಿಗೆ ಕಳ್ಳರು ನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ನೌಕರರಾದ ಧನಂಜಯ, ಶಾದೀಕ್ ಪಾಷಾ, ಶಿವಯೋಗಿ ಮತ್ತು ರೆಡ್ಡಿ ಈ ನಾಲ್ವರು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ನೌಕರರ ಅಕ್ಕಪಕ್ಕದ ಮನೆಗಳಿಗೆ ಬೀಗ ಜಡಿದು ಕಳ್ಳತನ ಮಾಡಿದ್ದಾರೆ.

ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಹಾಗೂ ಚಿನ್ನಾಭರಣಗಳನ್ನು ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ಧನಂಜಯ, ಶಾದೀಕ್ ಪಾಷಾ ತಿಳಿಸಿದ್ದಾರೆ.
ಇನ್ನು ಶಿವಯೋಗಿ ಮತ್ತು ರೆಡ್ಡಿ ಊರಿಗೆ ಹೋಗಿದ್ದು ವಾಪಸಾಗದ ಕಾರಣ ಎಷ್ಟು ಕಳ್ಳತನವಾಗಿದೆ ಎಂದು ತಿಳಿದು ಬಂದಿಲ್ಲ.

ಈ ಸಂಬಂಧ ಸಿಪಿಐ ಅಶೋಕ ಕುಮಾರ್, ಪಿಎಸ್‍ಐ ಪುಟ್ಟೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ