ಪೊಲೀಸರಿಂದ ಗಾಂಜಾ ಮಾರಾಟ ಮಾಡಿತ್ತಿದ ಆರೋಪಿಗಳ ಬಂದನ

ಬೆಂಗಳೂರು, ಫೆ.10- ಗಾಂಜಾ ಮಾರಾಟ ಮಾಡುತ್ತಿದ್ದ ಏಳು ಮಂದಿ ಅಂತಾರಾಜ್ಯ ಕುಖ್ಯಾತ ಆರೋಪಿಗಳನ್ನು ಬಂಧಿಸಿರುವ ಬಾಣಸವಾಡಿ ಠಾಣೆ ಪೆÇಲೀಸರು 19.50 ಲಕ್ಷ ರೂ.ಮೌಲ್ಯದ 39 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಒಡಿಶಾ ರಾಜ್ಯದ ಸುಜಿತ್‍ಕುಮಾರ್ ಅಲಿಯಾಸ್ ಸುಜಿತ್ (32), ಅರ್ಜುನ್‍ಕೊಹರ್ (20), ಅಜಿತ್ (28), ರಾಘವ್ ಶಾಮಲ್ (21), ಬಿಕ್ರಮ್ ಕೋಹರ್ (22), ಬೇದಭ್ಯಾಸ್ ಕೋಹರ್ (20) ಹಾಗೂ ಅಜಿತ್‍ಕೋಹರ್ (20) ಬಂಧಿತ ಆರೋಪಿಗಳು.

ಆರೋಪಿಗಳು ಬಾಣಸವಾಡಿ ಪೆÇಲೀಸ್ ಠಾಣೆವ್ಯಾಪ್ತಿಯ ರಾಮಸ್ವಾಮಿಪಾಳ್ಯದ ಐಒಸಿ ಸರ್ಕಲ್‍ನ ಬ್ರಿಡ್ಜ್ ಕೆಳಗಿನ ರಸ್ತೆಯಲ್ಲಿ ಗಾಂಜಾ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು.

ಖಚಿತ ಮಾಹಿತಿ ಆಧರಿಸಿ ನಗರ ಪೆÇಲೀಸ್ ಆಯುಕ್ತ ಸುನೀಲ್‍ಕುಮಾರ್, ಹೆಚ್ಚುವರಿ ಪೆÇಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿನ್ಹ ಅವರ ಮಾರ್ಗದರ್ಶನದಲ್ಲಿ ಪೂರ್ವ ವಿಭಾಗದ ಉಪ ಪೆÇಲೀಸ್ ಆಯುಕ್ತ ರಾಹುಲ್‍ಕುಮಾರ್ ಶಾಪುರವಾಡ ಅವರ ನೇತೃತ್ವದಲ್ಲಿ ಬಾಣಸವಾಡಿ ಠಾಣೆ ಇನ್ಸ್‍ಪೆಕ್ಟರ್ ಆರ್.ವಿರುಪಾಕ್ಷಸ್ವಾಮಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ