ಹಣ ಮತ್ತು ಆಭರಣಕ್ಕಾಗಿ ದುಷ್ಕರ್ಮಿಗಳಿಂದ ಮಹಿಳೆಯ ಕೊಲೆ

ಬೆಂಗಳೂರು, ಫೆ.6- ಹಣ ಹಾಗೂ ಆಭರಣಕ್ಕಾಗಿ ಒಂಟಿ ಮಹಿಳೆಯನ್ನು ದುಷ್ಕರ್ಮಿಗಳು ಕೊಲೆ ಮಾಡಿರುವುದು ಸಂಪಂಗಿರಾಮನಗರ ಠಾಣೆ ಪೆÇಲೀಸರ ತನಿಖೆಯಿಂದ ದೃಢಪಟ್ಟಿದೆ.
ಮನೆಯಲ್ಲಿದ್ದ ಅಪಾರ ಪ್ರಮಾಣದ ನಗ-ನಾಣ್ಯ ದೋಚಿದ್ದು, ಒಟ್ಟು ಮೌಲ್ಯ ತಿಳಿದುಬಂದಿಲ್ಲವಾದರೂ ಒಂದು ಲಕ್ಷ ಹಣ, ಐದು ಚಿನ್ನದ ಸರಗಳು ಮತ್ತು ನಾಲ್ಕು ಬಳೆಗಳನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.
ಕೆಎಸ್ ಗಾರ್ಡನ್ ಸಮೀಪದ ಲೀಸಾ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ರಾಜಸ್ತಾನ ಮೂಲದ ಸಂತೋಷಿ ದೇವಿ ಸುಲ್ತಾನಿಯಾ (70) ಎಂಬುವವರು ನಿನ್ನೆ ಮಧ್ಯಾಹ್ನ ಮನೆಯಲ್ಲಿ ಒಂಟಿಯಾಗಿದ್ದಾಗ ದುಷ್ಕರ್ಮಿಗಳು ಮನೆಗೆ ನುಗ್ಗಿ ತಲೆಗೆ ಹಲ್ಲೆ ನಡೆಸಿ ಕೊಲೆ ಮಾಡಿ ಮನೆಯಲ್ಲಿದ್ದ ಹಣ-ಆಭರಣ ದೋಚಿದ್ದು, ಒಟ್ಟು ಮೌಲ್ಯ ಸದ್ಯಕ್ಕೆ ನಿಖರವಾಗಿ ತಿಳಿದುಬಂದಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ