ಅಂಬರೀಶ್ ಕುಟುಂಬದ ಬಗ್ಗೆ ಯಾರು ಮಾತನಾಡಬಾರದು: ಸಚಿವ ಪುಟ್ಟರಾಜು

ಬೆಂಗಳೂರು, ಫೆ.6- ನಟ ಅಂಬರೀಶ್ ಕುಟುಂಬದವರ ಬಗ್ಗೆ ಯಾರೂ ಮಾತನಾಡಬಾರದು. ಶ್ರೀಕಂಠೇಗೌಡರ ಹೇಳಿಕೆ ಮುಗಿದ ಅಧ್ಯಾಯ ಎಂದು ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ನಟಿ ಸುಮಲತಾ ಮಂಡ್ಯದ ಗೌಡ್ತಿಯಲ್ಲ ಎಂಬ ಕೆ.ಟಿ.ಶ್ರೀಕಂಠೇಗೌಡರ ಹೇಳಿಕೆ ವಿಷಯವಾಗಿ ಮಾತನಾಡಿದ ಅವರು, ಇದನ್ನು ಮುಂದುವರಿಸುವುದು ಬೇಡ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಈ ಬಗ್ಗೆ ಎಲ್ಲರಿಗೂ ಸೂಚನೆ ಕೊಟ್ಟಿದ್ದೇನೆ. ಯಾರೂ ಈ ಬಗ್ಗೆ ಮಾತನಾಡಬಾರದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ