ಸಿಬಿಐ ರಾಜಕೀಯ : ಕೇಂದ್ರ ಸಚಿವ ತೋಮರ್, ಖರ್ಗೆ

ದೆಹಲಿ,ಫೆ.-05-ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಿಬಿಐ ಸಮಸ್ಯೆಯನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.

ಸಂಸತ್ತಿನ ಹೊರಗಡೆ ಮಾತನಾಡಿದ ಸಚಿವರು, ವಿರೋದ ಪಕ್ಷಗಳು ಪಶ್ಚಿಮ ಬಂಗಾಲ ಸರ್ಕಾರವನ್ನು ಬೆಂಬಲಿಸುವ ಬದಲು ತನಿಖಾ ಸಂಸ್ಥೆಗೆ ಬೆಂಬಲ ನೀಡಬೇಕೆಂದು ಹೇಳಿದರು. ತನಿಖಾ ಸಂಸ್ಥೆಗೆ ಬೆಂಬಲ ನೀಡುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಕೇಂದ್ರ ಸರ್ಕಾರ ವಿರೋದ ಪಕ್ಷಗಳನ್ನು ನಿಗ್ರಹಿಸಲು ಸಿಬಿಐನ್ನು ದುರ್ಭಳಕೆ ಮಾಡಿಕೊಳ್ಳುತ್ತಿದೆ ಎಂದು ಹಿರಿಯ ಕಾಂಗ್ರೇಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಹೇಳಿದರು. ನಾವು ಯಾವುದೇ ವ್ಯಕ್ತಿ, ಅಧಿಕಾರಿ ಅಥವಾ ಪಕ್ಷದ ವಿರುದ್ಧ ಹೋರಾಡುತ್ತಿಲ್ಲ, ಸ್ವನಿಯಂತ್ರಿತ ಸಂಸ್ಥೆಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ