ಕಾಂಗ್ರೇಸ್‍ನವರು ಕಿರುಕುಳ ಕೊಡುತ್ತಿದ್ದಾರೆ ಎಂದು ಸಿ.ಎಂ. ಅವರೇ ಹೇಳಿದ್ದಾರೆ: ಮಾಜಿ ಡಿಸಿಎಂ ಆರ್.ಆಶೋಕ್

ಹುಬ್ಬಳ್ಳಿ,ಫೆ.3- ಕಿರುಕುಳಗಳ ಮಧ್ಯೆ ಸಿಎಂ ಬಜೆಟ್ ಮಂಡನೆ ಮಾಡ್ತಾರೆ ಎನ್ನೋದು ನಂಗೆ ಗೊತ್ತಿಲ್ಲ ಎಂದುಮಾಜಿ ಡಿಸಿಎಂ ಆರ್ ಅಶೋಕ ಹೇಳಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಕಿರುಕುಳ ನೀಡುತ್ತಿದ್ದಾರೆ ಅಂತ ಈಗಾಗಲೆ ಅವರೇ ಹೇಳಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಪರ ಹಾಗೂ ಪರಮೇಶ್ವರ್ ವಿರೋಧಿ ಗ್ಯಾಂಗ್ ಇದೆ ಎಂಬುದು ಗೊತ್ತಾಗುತ್ತದೆ ಎಂದರು.

ಸಿದ್ದರಾಮಯ್ಯನವರೇ ನಮ್ಮ ಸಿಎಂ ಎನ್ನುತ್ತಾರೆ,
ಹಾಗಿದ್ರೆ ಇವಾಗಿರೋ ಸಿಎಂ ಏನ್ ಡಮ್ಮಿನಾ…? ಕ್ಲರ್ಕ್‍ನಾ…? ಹಾಗಾದ್ರೆ ಹೆಚ್‍ಡಿಕೆ ಏನು….? ಎಂದು ಪ್ರಶ್ನೆ ಮಾಡಿದ ಅಶೋಕ ಎಲ್ಲಿ ಸಿದ್ದರಾಮಯ್ಯನವರೇ ಸರ್ಕಾರ ಬೀಳಿಸುತ್ತಾರೆಂಬ ಅನುಮಾನ ಕಾಡುತ್ತಿದೆ ಎಂದು ಅವರು ಹೇಳಿದರು.

ಏಳು ತಿಂಗಳಿನಿಂದ ಸರ್ಕಾರ ಅಭದ್ರತೆಯಿಂದಲೆ ಇದ್ದುಮೈತ್ರಿ ಸರ್ಕಾರ ಕಳಪೆ ಆಡಳಿತ ಅಂತ ಪುಟ್ಟರಾಜು ಅವರೇ ಹೇಳಿದ್ದಾರೆ ಇದಕ್ಕೆ ಇನ್ನೇನು ನಿದರ್ಶನ ಬೇಕು ಎಂದ ಅವರು, ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ಒಂದೇ ಆಗೋತ್ತಿರೋದು ಎಂದು ಆರೋಪ ಮಾಡಿದರು.

ಇನ್ನು ಅಂಬರೀಶ್ ನಟರಾಗಿ, ಸಂಸದರಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಹಾಗಾಗಿ ಸುಮಲತಾ ಸ್ಪರ್ಧೆ ವಿಚಾರ ಸಹಜ. ಆದರೆ ಅವರು ನಮ್ಮ ಪಕ್ಷವನ್ನ ಸಂಪರ್ಕ ಮಾಡಿಲ್ಲ. ಅವರು ಬಂದ್ರೆ ನಾನು ಸ್ವಾಗತ ಮಾಡುತ್ತೇನೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ