ತಮಿಳುನಾಡಿನ ಫ್ಲಾಸ್ಕ್​ ಉದ್ಯಮಿಗೆ ಭೇಷ್​ ಅಂದ್ರು ಮೋದಿ, ಯಾರೀ ಮಹಿಳೆ?

ಮಧುರೈ : ಮಧುರೈ ಏಮ್ಸ್ ಆಸ್ಪತ್ರೆಯ ಉದ್ಘಾಟನೆ ವೇಳೆ ‘ಮುದ್ರಾ’ ಯೋಜನೆಯ ಫಲಾನುಭವಿ ಅರುಳ್​ಮೋಳಿ ಸರವಣನ್ ಎಂಬ ಮಹಿಳೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದಾರೆ.

ಅರುಳ್​ಮೋಳಿ ಸರವಣನ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮುದ್ರಾ ಯೊಜನೆಯ ಸಹಕಾರದಿಂದ ಥರ್ಮೋಫ್ಲಾಸ್ಕ್​ ಉದ್ಯಮದಲ್ಲಿ ಯಶಸ್ವಿಯಾಗಿ ತಮಿಳುನಾಡಿನಲ್ಲಿ ಮನೆ ಮಾತಾಗಿದ್ದಾರೆ.
2017ರಲ್ಲಿ ಸರ್ಕಾದ ಇ-ಮಾರುಕಟ್ಟೆಯ ಮೂಲಕ ಪ್ರಧಾನಿ ಕಾರ್ಯಾಲಯಕ್ಕೆ ಥರ್ಮೋಫ್ಲಾಸ್ಕ್​ ಅಗತ್ಯವನ್ನು ಅರಿತ ಅರುಳ್​ಮೋಳಿ ಸರವಣನ್, ಕೆಲ ಥರ್ಮೋಫ್ಲಾಸ್ಕ್​​ಗಳನ್ನು ಕಳಿಸಿದ್ದರು. ಆನಂತರ ಫ್ಲಾಸ್ಕ್​​ಗಳ ಗುಣಮಟ್ಟದಿಂದ ಸಂತುಷ್ಟವಾದ ಕಾರ್ಯಾಲಯ ಮತ್ತಷ್ಟು ಫ್ಲಾಸ್ಕ್​​ ಕಳಿಸುವಂತೆ ಮನವಿ ಮಾಡಿತ್ತು.  ಈ ಕುರಿತು ಅರುಳ್​ಮೋಳಿ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಈ ಸಂಗತಿಯನ್ನು ‘ಮೋದಿ ಮನ್​ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಸ್ಥಾಪಿಸಿದ್ದರು. ಇತ್ತೀಚಿಗೆ ಅರುಳ್​ಮೋಳಿ, ಮತ್ತೊಮ್ಮೆ ಮೋದಿಗೆ ಪತ್ರ ಬರೆದು ಉದ್ಯಮದ ಕುರಿತು ವಿವರಿಸಿದ್ದರು.
ಕೇವಲ 234ರೂ ವ್ಯಯಿಸಿ ಸಣ್ಣ ಮಟ್ಟದಲ್ಲಿ ಉದ್ಯಮ ಆರಂಭಿಸಿದ ಅರುಳ್​ಮೋಳಿ, ಇದೀಗ ಕೋಟ್ಯಾಧಿಪತಿಯಾಗಿದ್ದಾರೆ. ಇದಕ್ಕೆಲ್ಲ ಕೇಂದ್ರ ಸರ್ಕಾರದ ಪ್ರೋತ್ಸಾಹವೇ ಕಾರಣ ಎಂದು ಕೊಂಡಾಡಿದ್ದಾರೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ