ಮಾಧ್ಯಮದ ವಿರುದ್ಧ ಗರಂ ಆದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಬೆಂಗಳೂರು, ಜ.24- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಅನಗತ್ಯವಾಗಿ ಮಾಧ್ಯಮದ ವಿರುದ್ಧ ಇಂದು ಗರಂ ಆಗಿದ್ದಾರೆ.

ಕಂಪ್ಲಿ ಶಾಸಕ ಗಣೇಶ್ ಪರವಾಗಿ ಅವರ ಬೆಂಬಲಿಗರು ಇಂದು ಕೆಪಿಸಿಸಿ ಕಚೇರಿಗೆ ಮನವಿ ಪತ್ರ ನೀಡಲೆಂದು ಬಂದ ವೇಳೆ ಚಿತ್ರೀಕರಿಸಲು ಮುಂದಾದ ಸಂದರ್ಭದಲ್ಲಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಾಧ್ಯಮಗಳ ಮೇಲೆ ಗರಂ ಆಗಿ ಇದು ನಮ್ಮ ಕಚೇರಿ, ನೀವೇಕೆ ಬಂದ್ರಿ ಎಂದು ಧಮ್ಕಿ ಹಾಕಿದ್ದಾರೆ.ಅಲ್ಲದೆ ಹೊರ ಹೋಗುವಂತೆ ತಾಕೀತು ಕೂಡ ಮಾಡಿದ್ದಾರೆ.

ಇದರಿಂದ ಮಾಧ್ಯಮದವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.ರೆಸಾರ್ಟ್ ರಾಜಕಾರಣ, ಬಿಡದಿ ರೆಸಾರ್ಟ್‍ನಲ್ಲಿ ಶಾಸಕರ ನಡುವೆ ನಡೆದ ಗಲಾಟೆ ಮುಂತಾದ ವಿಷಯಗಳು ಮಾಧ್ಯಮಗಳಲ್ಲಿ ನಿರಂತರವಾಗಿ ಬಿತ್ತರವಾಗುತ್ತಿದ್ದವು. ಶಾಸಕರ ನಡುವೆ ನಡೆದ ಗಲಾಟೆ ಸಂಬಂಧ ಪರ-ವಿರೋಧದ ಹೇಳಿಕೆಗಳು ಬಹಿರಂಗವಾಗಿದ್ದವು.

ಕಂಪ್ಲಿ, ವಿಜಯನಗರದಲ್ಲಿ ಆನಂದ್‍ಸಿಂಗ್, ಗಣೇಶ್ ಪರ-ವಿರೋಧ ಪ್ರತಿಭಟನೆಗಳು ನಡೆಯುತ್ತಿದ್ದವು. ಹಲ್ಲೆಯಲ್ಲಿ ಗಾಯಗೊಂಡಿರುವ ಶಾಸಕ ಆನಂದ್‍ಸಿಂಗ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಗಣೇಶ್ ಪರವಾಗಿ ಬೆಂಬಲಿಗರು ಮನವಿ ಪತ್ರ ನೀಡುವ ಸಂದರ್ಭದಲ್ಲಿ ಮಾಧ್ಯಮಗಳ ವಿರುದ್ಧ ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ