ಮೂವರು ಜಾನುವಾರು ಕಳ್ಳರನ್ನು ಬಂಧಿಸಿದ ಪೊಲೀಸರು

ಮೈಸೂರು, ಜ.22- ಗೂಡ್ಸ್ ವಾಹನದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಮೂವರು ಜಾನುವಾರು ಕಳ್ಳರನ್ನು ಆಲನಹಳ್ಳಿ ಠಾಣೆ ಪೊಲೀಸರು ಬಂಧಿಸಿ ನಾಲ್ಕು ಹಸುಗಳನ್ನು ರಕ್ಷಿಸಿದ್ದಾರೆ.

ಶಾಂತಿನಗರದ ನಿವಾಸಿಗಳಾದ ಆಯೂಬ್‍ಪಾಷ(20), ಸಯ್ಯದ್ (22), ಮಹಮದ್ ಶೋಯೆಲ್ (19) ಬಂಧಿತರು.

ಟಿ.ನರಸೀಪುರ ತಾಲ್ಲೂಕಿನ ರಿಂಗ್‍ರಸ್ತೆಯಲ್ಲಿ ಆಲನಹಳ್ಳಿ ಠಾಣೆ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಈ ಮಾರ್ಗದಲ್ಲಿ ಬಂದ ಗೂಡ್ಸ್ ಟೆಂಪೋ ಚಾಲಕ ಪೊಲೀಸರನ್ನು ಕಂಡು ವಾಹನವನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಸಾಗುತ್ತಿದ್ದ.

ಇದನ್ನು ಗಮನಿಸಿದ ಪೊಲೀಸರು ಬೆನ್ನಟ್ಟಿ ಹೋಗಿ ಗೂಡ್ಸ್ ವಾಹನವನ್ನು ತಡೆದು ಪರಿಶೀಲಿಸಿದಾಗ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದುದ್ದು ಗಮನಿಸಿ ಟೆಂಪೋದಲ್ಲಿದ್ದ ಮೂವರನ್ನು ಬಂಧಿಸಿ ನಾಲ್ಕು ಹಸುಗಳನ್ನು ರಕ್ಷಿಸಿದ್ದಾರೆ.

ಆಲನಹಳ್ಳಿ ಠಾಣೆ ಇನ್ಸ್‍ಪೆಕ್ಟರ್ ಮಂಜು, ಸಿದ್ದಾರ್ಥ ಸಂಚಾರ ಠಾಣೆ ಸಬ್‍ಇನ್ಸ್‍ಪೆಕ್ಟರ್ ಸತೀಶ್‍ಕುಮಾರ್ ಅರಸು, ಎಎಸ್‍ಐ ಸತ್ಯಕುಮಾರ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ