ಬಿಜೆಪಿಯಿಂದ ಎದುರಾಗಿತ್ತಿರುವ ಒತ್ತಡ ತಡೆಯವುದಕ್ಕಾಗಿ ಕಾಂಗ್ರೇಸ್ ಶಾಸಕರ ರೆಸಾರ್ಟ್ ವಾಸ್ತವ್ಯ

ಬೆಂಗಳೂರು, ಜ.19- ಬಿಜೆಪಿಯವರಿಂದ ಎದುರಾಗುತ್ತಿರುವ ಒತ್ತಡ ತಡೆಯುವ ಅನಿವಾರ್ಯತೆ ಉಂಟಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಒಂದೆಡೆ ಸೇರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೆರೇಗೌಡ ಸಮರ್ಥಿಸಿಕೊಂಡರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಬಿಜೆಪಿಯವರು ನಡೆಸುತ್ತಿರುವ ಸರ್ಕಾರ ಉರುಳಿಸುವ ಪ್ರಯತ್ನವನ್ನು ವಿಫಲಗೊಳಿಸಿದ್ದೇವೆ. ಆದರೂ ಸಹ ಅವರು ಆ ಪ್ರಯತ್ನವನ್ನೂ ಬಿಟ್ಟಿಲ್ಲ. ನಮ್ಮ ಕೆಲವು ಶಾಸಕರನ್ನು ನೇರವಾಗಿ ಸಂಪರ್ಕಿಸಿ ಆಮಿಷವೊಡ್ಡುತ್ತಿದ್ದಾರೆ.ಅದನ್ನು ತಡೆಯುವುದು ನಮಗೆ ಅನಿವಾರ್ಯ.ಹೀಗಾಗಿ ಶಾಸಕರನ್ನು ಒಂದೆಡೆ ಸೇರಿಸಿದ್ದೇವೆ ಎಂದರು.

ಬಿಜೆಪಿಯವರು ಕಳೆದ ಒಂದು ವಾರದಿಂದ ಅವರ ಶಾಸಕರನ್ನು ಕೂಡಿ ಹಾಕಿದ್ದಾರೆ.ರೆಸಾರ್ಟ್ ಸಂಸ್ಕøತಿಯನ್ನು ಆರಂಭಿಸಿದವರೇ ಅವರು.ಬಿಜೆಪಿಯವರಿಂದ ನಡೆಯುತ್ತಿರುವ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ತಡೆಯುವುದೇ ನಮ್ಮ ಅನಿವಾರ್ಯ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ