ಸಿದ್ದಗಂಗಾಶ್ರೀಗಳು ಈ ನಾಡಿಗೆ ನೀಡಿರುವ ಕೊಡಗೆ ಅಪಾರ

ಹಾಸನ, ಜ.19- ಸಿದ್ದಗಂಗಾ ಶ್ರೀಗಳು ಈ ನಾಡಿಗೆ ನೀಡಿರುವ ಕೊಡುಗೆ ಅಪಾರ. ಅವರು ನಡೆದಾಡುವದೇವರಿದ್ದಂತೆ.ಶ್ರೀಗಳಿಗೆ ಭಾರತರತ್ನ ನೀಡಬೇಕುಎಂಬುದು ನಮ್ಮ ಹಾಗೂ ಸರ್ಕಾರದ ಅಭಿಲಾಶೆ ಎಂದು ಜಿಲ್ಲಾಉಸ್ತು ವಾರಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.

ಮೊಸಳೆ ಹೊಸಹಳ್ಳಿ ಸರ್ಕಾರಿ ಐಟಿ ಕಾಲೇಜುಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಬಡವರು, ಕೂಲಿ ಕಾರ್ಮಿಕರಿಗೂಉತ್ತಮ ಶಿಕ್ಷಣ ದೊರೆಯಬೇಕು.ಈ ನಿಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇಆಂಗ್ಲ ಮಾಧ್ಯಮ ಸರ್ಕಾರಿ ಶಾಲೆ ತೆರೆಯಲಾಗುವುದುಎಂದು ಸಚಿವರು ತಿಳಿಸಿದರು.

ಯಾರು ವಿರೋಧ ಮಾಡಿದರೂತಮ್ಮ ನಿಲುವಿನಲ್ಲಿ ಬದಲಾವಣೆಇಲ್ಲ. ಬಡವರ ಮಕ್ಕಳಿಗೆ ಒಂದುರೀತಿ ಶಿಕ್ಷಣ ಹಾಗೂ ಉಳ್ಳವರ ಮಕ್ಕಳಿಗೆ ಒಂದುರೀತಿ ಶಿಕ್ಷಣ ನ್ಯಾಯ ಸಮ್ಮತವಲ್ಲ. ಸಚಿವರು ಖಾಸಗಿ ಶಾಲೆ ಸೇರಿದಂತೆರಾಜ್ಯದಲ್ಲಿ ಸಂಪೂರ್ಣಕನ್ನಡ ಮಾಧ್ಯಮ ಶಿಕ್ಷಣ ಸಿಗುವಂತಾಗಲಿ.ಎಲ್ಲರಿಗ ಏಕ ರೂಪದ ಶಿಕ್ಷಣದ ಸೌಲಭ್ಯವಿರಲಿ.ಅದಕ್ಕೆ ನಮ್ಮ ಸಹಮತವಿದೆಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ