ಮಕರ ಸಂಕ್ರಾಂತಿ ಅಂಗವಾಗಿ ಗೊಮ್ತಿ ನದಿಯಲ್ಲಿ ಮಾಲಿನ್ಯದ ಕಾರಣ ಭಕ್ತರು ನದಿಯಲ್ಲಿ ಸ್ನಾನ ಮಾಡದೆ ನಿರಾಶೆಯಿಂದ ಹಿಂದಿರುಗಿದರು

ಲಖ್ನೋ ನ .14- ಮಕರ ಸಂಕ್ರಾಂತಿ ಅಂಗವಾಗಿ ಗೊಮ್ತಿ ನದಿಯಲ್ಲಿ ಪವಿತ್ರ ಸ್ನಾನ ಮಾಡುವ ಪ್ರತೀತಿ ಇದೆ. ಆದರೆ ಮಾಲಿನ್ಯದ ಕಾರಣ ಇಂದು ಭಕ್ತರು ನದಿಯಲ್ಲಿ ಸ್ನಾನ ಮಾಡದೆ ನಿರಾಶೆಯಿಂದ ಹಿಂದಿರುಗಿದ್ದಾರೆ.

ಜಲಮಾಲಿನ್ಯ ಮಾಡದಂತೆ ಜನರಿಗೆ ಮನವಿ ಮಾಡಿದ್ದರು ಭಕ್ತರು ನದಿಗಳಲ್ಲಿ ಹೂಗಳನ್ನು ಎಸೆಯುತ್ತಾರೆ. ಮಕರ ಸಂಕ್ರಾಂತಿಗಿಂತ ಮುಂಚೆ ಸರ್ಕಾರ ಅದನ್ನು ಸ್ವಚ್ಛಗೊಳಿಸಬೇಕಾಗಿತ್ತು. ಆದರೆ ನದಿ ಮಾಲಿನ್ಯದಿಂದ ಕೂಡಿದೆ ಎಂದು ನಾಸ್ತಿಕರೊಬ್ಬರು ಹೇಳಿದ್ದಾರೆ.

ಲಖ್ನೋ ನಗರದ ಇತರ ಘಾಟ್‍ಗಳಿಗೆ ಹೋಲಿಸಿದರೆ ಗೈಲಾ ಘಾಟ್‍ನಿಂದ ಗುವಾಘಾಟ್ ಮಾಲಿನ್ಯರಹಿತವಾಗಿದ್ದು, ಆದರೆ ಕೆಲವು ವರ್ಷಗಳ ಹಿಂದೆ, ಗೈಲಾ ಘಾಟ್‍ಲ್ಲಿ ನೀರು ಸ್ಫಟಿಕದಷ್ಟೇ ಶುದ್ದವಾಗಿತ್ತು ಎಂದು ಸ್ಥಳೀಯರೊಬ್ಬರು ಹೇಳುತ್ತಾರೆ.

ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಈ ಘಾಟ್‍ಗಳು ಕೂಡ ಮಾಲಿನ್ಯವಾಗುತ್ತಿದೆ. ಕೊಳಕು, ಹೂಳು ಮತ್ತು ಕಷ್ಮಲಗಳು ಇಲ್ಲಿ ಉತ್ಪತ್ತಿಯಾಗುತ್ತಿದೆ. ಇದರಿಂದ ಆಮ್ಲಜನಕದ ಮಟ್ಟ ಕುಸಿದಿದ್ದು ನದಿಯ ಜಲಚರಗಳಿಗೆ ಮಾರಕವಾಗಿದೆ.

ಇದರಲ್ಲಿ ಪ್ರಮುಖ ಮಾಲಿನ್ಯಕಾರಕ ಅಂಶಗಳು ಸೀತಾಪುರ್‍ನಲ್ಲಿರುವ ಸಕ್ಕರೆ ಗಿರಣಿಯಿಂದ ಬರುವ ತ್ಯಾಜ್ಯ ಗೈಲಾ ಸೇತುವೆ ಬಳಿ ಹಾಕುತ್ತಾರೆ. ಅಲ್ಲದೆ ಗೋಮ್ತಿ ನದಿ ಶುದ್ದೀಕರಣ ಯೋಜನೆಗಾಗಿ ಉಂಟಾಗುತ್ತಿರುವ ಅಡಚಣೆಗಳಿಂದಾಗಿ ಜಲಮಾಲಿನ್ಯ ವಿಪರೀತವಾಗಿದೆ ಎಂದು ತಜ್ಞರೊಬ್ಬರು ಆತಂಕದಿಂದ ಹೇಳುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ