![veerpura](http://kannada.vartamitra.com/wp-content/uploads/2019/01/veerpura-677x381.jpg)
ಬಾಗಲಕೋಟ: ತಾಲೂಕಿನ ವೀರಾಪೂರ ಪುಕೇ. ಗ್ರಾಮದಲ್ಲಿ ಶ್ರದ್ದಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮದ ಅಡಿಯಲ್ಲಿ ವೀರಾಪೂರಿನ ಗ್ರಾಮ ದೇವತೆ ದೇವಸ್ಥಾನ ಮತ್ತು ಹೋರಾಂಗಣ ಸ್ವಚ್ಚತಾ ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದಿಂದ ಸ್ವಚ್ಚತಾ ಕಾರ್ಯ ಮಾಡಲಾಯಿತು.
ಮುರನಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಣುಕಾ ಬಂಟನೂರ ಅಧ್ಯಕ್ಷತೆ ವಹಿಸಿದ್ದರು, ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿಯ ಮೇಲ್ವೆಚಾರಕರಾದ ಮಾಹಾಂತೇಶ ಗೌರಿಮಠ, ಕೃಷಿ ಅಧಿಕಾರಿ ಸುರೇಶ ತಳವಾರ, ಗ್ರಾ.ಪಂ. ಸದಸ್ಯರಾದ ಯಮನವ್ವ ಯಂಕಂಚಿ, ವಲಯ ಸೇವಾ ಪ್ರತಿನಿಧಿ ಸುಶೀಲಾ ದೊಡ್ಡಮನಿ, ಮತ್ತು ಸ್ವ-ಸಹಾಯ ಸಂಘದ ಸದಸ್ಯರು ಭಾಗವಸಿದ್ದರು.