ಮುಂದುವರೆದ ನಾಪತ್ತೆಯಾಗಿರುವ ಮೀನುಗಾರರ ಹುಡುಕಾಟ

ಬೆಂಗಳೂರು, ಜ.12-ನಾಪತ್ತೆಯಾಗಿರುವ ಮೀನುಗಾರರ ಸುಳಿವು ದೊರೆತಿಲ್ಲ. ಆದರೆ ಅವರ ಹುಡುಕಾಟವನ್ನು ಮುಂದುವರೆಸಲಾಗಿದೆ. ಮಾಧ್ಯಮಗಳಲ್ಲಿ ಮೀನುಗಾರರ ಸುಳಿವು ದೊರೆತಿದೆ ಎಂದು ಮಾಡಿರುವ ವರದಿ ಆಧಾರರಹಿತ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀನುಗಾರರ ಪತ್ತೆಗೆ ಸರ್ಕಾರ ತೀವ್ರ ಪ್ರಯತ್ನ ನಡೆಸಿದೆ. ಮಹಾರಾಷ್ಟ್ರ ಹಾಗೂ ಗೋವಾ ಸರ್ಕಾರಗಳಿಗೆ ಮಾನವೀಯತೆ ಹಿನ್ನೆಲೆಯಲ್ಲಿ ಸಹಕಾರ ಕೋರಿ ಪತ್ರ ಬರೆಯಲಾಗುತ್ತಿದೆ. ಅದೇ ರೀತಿ ಇಸ್ರೋದ ನೆರವು ಪಡೆಯಲು ನಿರ್ಧರಿಸಿ, ಸಂಸ್ಥೆಗೂ ಪತ್ರೆ ಬರೆಯುತ್ತಿದ್ದೇವೆ ಎಂದು ತಿಳಿಸಿದರು.

ಮೀನುಗಾರರ ಕುಟುಂಬ ಆತಂಕದಲ್ಲಿದೆ.ಕೇರಳದ ಕೊಚ್ಚಿಯಲ್ಲೂ ಹುಡುಕಾಟ ನಡೆಸಲಾಗಿದೆ.ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ