‘ಟ್ರೋಫಿಯನ್ನ ನೀನು ಎತ್ತಿ ಹಿಡಿ ‘ ಮಯಾಂಕ್ ಕೈಗೆ ಟ್ರೋಫಿ ಕೊಟ್ಟ ಕೊಹ್ಲಿ

ಟೀಂ ಇಂಡಿಯಾ ಓಪನರ್ ಕನ್ನಡಿಗ ಮಯಾಂಕ್ ಅಗರ್‍ವಾಲ್ ನಾಯಕ ವಿರಾಟ್ ಕೊಹ್ಲಿಯ ಹೃದಯ ವೈಶಾಲ್ಯತೆ ಕುರಿತ ವಿಷಯವೊಂದನ್ನ ಬಹಿರಂಗ ಪಡಿಸಿದ್ದಾರೆ.

ಮೊನ್ನೆ ಸಿಡ್ನಿ ಪಂದ್ಯವನ್ನ ಡ್ರಾ ಮಾಡಿಕೊಳ್ಳುವ ಮೂಲಕ ಟೀಂ ಇಂಡಿಯಾ ಆಸಿಸ್ ನೆಲದಲ್ಲಿ ಚೊಚ್ಚಲ ಐತಿಹಾಸಿಕ ಸರಣಿ ಗೆದ್ದುಕೊಂಡಿತು. ಟೀಂ ಇಂಡಿಯಾ ಆಟಗಾರರು ಐತಿಹಾಸಿಕ ಗೆಲುವಿನ ಸಂತಸವನ್ನ ಸಂಭ್ರಮಿಸಿದರು.

ನಾನು ಸೇರಿದಂತೆ ಇಡೀ ತಂಡ ಆಟಗಾರರು ಗೆಲುವಿನ ಸಂಭ್ರಮ ಆಚರಿಸಲು ವೇದಿಕೆ ಮೇಲೆ ಹೋದಾಗ ನಾಯಕ ವಿರಾಟ್ ಕೊಹ್ಲಿ ನನ್ನನ್ನ ತಡೆದರು. ಟ್ರೋಫಿಯನ್ನ ನೀನು ಎತ್ತಿ ಹಿಡಿ ಎಂದರು. ನನಗೆ ಆ ಕ್ಷಣ ನಂಬಲು ಆಗಲಿಲ್ಲ. ಈ ಕ್ಷಣ ಒಬ್ಬ ಕ್ರಿಕೆಟಿಗನಿಗೆ ತುಂಬ ದೊಡ್ಡ ಸಂದರ್ಭ ಆಗಿತ್ತು. ಇಂತಹ ಸಂದರ್ಭದಲ್ಲಿ ಅನುಭವಿಸಿದ ನಾನೆ ತುಂಬ ಲಕ್ಕಿ ಎನಿಸಿತು ಎಂದು ಕನ್ನಡಿಗ ಮಯಾಂಕ್ ಅಗರ್‍ವಾಲ್ ಹೇಳಿಕೊಂಡಿದ್ದಾರೆ.

ಆಸಿಸ್ ವಿರುದ್ಧದ ಗೆಲುವು ಅತಿ ದೊಡ್ಡ ಗೆಲುವು.ಕಾಂಗರೂಗಳ ನೆಲದಲ್ಲಿ ಭಾರತದ ಮೊದಲ ಗೆಲುವು ಇದಾಗಿದ್ದು. ಆಸಿಸ್ ನಾಡಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ಉಪಖಂಡ ರಾಷ್ಟ್ರ ನಮ್ಮದಾಗಿದೆ. ನನಗೆ ಮತ್ತು ತಂಡಕ್ಕೆ ಹೆಮ್ಮೆಯ ವಿಷಯ. ನಾನಿನ್ನೂ ಆ ಗುಂಗಿನಿಂದ ಹೊರ ಬಂದಿಲ್ಲ. ನಾವೆ ಗೆದ್ದವರು ಎಂದು ಮಯಾಂಕ್ ಅಗರ್‍ವಾಲ್ ತಮ್ಮ ಸಂತಸವನ್ನ ಹಮಚಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ