ಕುಡಿದ ಅಮಲಿನಲ್ಲಿ ತನ್ನ ಮನೆಗೆ ತಾನೇ ಬೆಂಕಿ ಹಚ್ಚಿಕೊಂಡ ವ್ಯಕ್ತಿ

ಹಾಸನ,ಜ.2- ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಮನೆಗೆ ತಾನೇ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಶಾಂತಿ ಗ್ರಾಮ ಹೋಬಳಿಯ ಕೆ.ಬ್ಯಾಡರಹಳ್ಳಿ ಗ್ರಾಮದಲ್ಲಿ ಜರುಗಿದೆ.

ಬೆಂಗಳೂರಿನಲ್ಲಿ ವಾಸವಿರುವ ಯೋಗೇಶ್ ಹಾಗೂ ಕುಟುಂಬ ಹೊಸ ವರ್ಷಾಚರಣೆ ಹಿನ್ನೆಲೆ ಊರಿಗೆ ತೆರಳಿತ್ತು.

ಈ ವೇಳೆ ಕಂಠ ಮಟ್ಟ ಕುಡಿದಿದ್ದ ಯೋಗೇಶ್ ಮನೆಗೆ ಬಂದು ಪತ್ನಿಯೊಂದಿಗೆ ಜಗಳ ತೆಗೆದಿದ್ದ.ಆ ನಂತರ ಪತ್ನಿ ಮೇಲಿನ ಕೋಪಕ್ಕೆ ಜೇಬಿನಲ್ಲಿದ್ದ ಬೆಂಕಿಪೊಟ್ಟಣ ತೆಗೆದು ತನ್ನ ಮನೆಗೆ ತಾನೇ ಬೆಂಕಿ ಹೊತ್ತಿಸಿದ.

ನೋಡ ನೋಡುತ್ತಿದ್ದಂತೆ ಬೆಂಕಿ ಆವರಿಸಿಕೊಂಡಿತು.ಸುತ್ತ ಮುತ್ತಲಿನವರು ಬೆಂಕಿ ನಂದಿಸಲು ಮುಂದಾದಾಗ ಯೋಗೇಶ್ ಅವರನ್ನೂ ತಡೆದಿದ್ದಾರೆ.
ಆ ನಂತರ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸುತ್ತಿದ್ದರೆ ಯೋಗೇಶ್ ಅಲ್ಲಿಂದ ಪರಾರಿಯಾಗಿದ್ದಾನೆ.

ಪತ್ನಿಯ ಮೇಲಿನ ಕೋಪಕ್ಕೆ ಕಷ್ಟ ಪಟ್ಟು ಕಟ್ಟಿದ್ದ ಮನೆಯನ್ನೇ ಆಹುತಿ ತೆಗೆದುಕೊಂಡಿದ್ದಾನೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ