ಬಿಲ್ ಪಾವತಿ ಮಾಡದ ಹಿನ್ನಲೆ ಬಿಬಿಎಂಪಿ ಆಯುಕ್ತರ ಕಾರು ಜಪ್ತಿ ಮಾಡುವಂತೆ ನ್ಯಾಯಾಲಯದ ಆದೇಶ

ಬೆಂಗಳೂರು, ಡಿ.25- ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರ ಕಾರು ಜಪ್ತಿ ಮಾಡುವಂತೆ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ.

ಕಸದ ಗುತ್ತಿಗೆ ಪಡೆದಿದ್ದ ಕಂಟ್ರಾಕ್ಟರ್ ಹರೀಶ್ ಅವರಿಗೆ ಜಂಟಿ ಆಯುಕ್ತರಾದ ಸರ್ಫ್‍ರಾಜ್ ಖಾನ್ ಅವರು 66 ಲಕ್ಷ ಬಿಲ್ ಪಾವತಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಸಿಟಿ ಸಿವಿಲ್ ಕೋರ್ಟ್ ಹರೀಶ್ ಅವರಿಗೆ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತರ ಹೆಸರಿನಲ್ಲಿ ನೋಂದಣಿಯಾಗಿರುವ ಕೆಎ-01 ಎಂಇ3809, ಕೆಎ-09 ಎಂಎನ್9930, ಕೆಎ-01 ಎಂಎನ್8424 ಕಾರುಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದೆ.

ಕಸದ ಗುತ್ತಿಗೆ ಪಡೆದಿದ್ದ ಇವರಿಗೆ 66 ಲಕ್ಷ ರೂ. ಬಿಲ್ ಪಾವತಿಸಿರಲಿಲ್ಲ. ಹೀಗಾಗಿ ಬಿಲ್ ಪಾವತಿಸುವವರೆಗೆ ಈ ಮೂರು ಕಾರ್‍ಗಳನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ