ಕಣೆಣಿಗೆ ಹಬ್ಬವನ್ನು ನೀಡಿದ ವೈವಿಧ್ಯಮಯ ನೃತ್ಯಗಳು

ಬೆಂಗಳೂರು, ಡಿ.24-ಹೆಸರಿಗೆ ಅನ್ವರ್ಥಕವಾಗಿ ರಸಾನಂದ ನೃತ್ಯಶಾಲೆಯ ವಿದ್ಯಾರ್ಥಿಗಳು ಇತ್ತೀಚಿಗೆ ನಗರದ ಎ.ಡಿ.ಎ. ರಂಗಮಂದಿರದಲ್ಲಿ ನಡೆಸಿಕೊಟ್ಟ ವೈವಿಧ್ಯಮಯ ನೃತ್ಯ ಪ್ರಸ್ತುತಿಗಳು ಕಣ್ಣಿಗೆ ಹಬ್ಬವಾಗಿ ರಸಾನುಭವವನ್ನು ನೀಡಿದವು.

ವಿದುಷಿ ಪೂರ್ಣಿಮಾ ಮೋಹನ್‍ರಾಂ ಅವರ ಕಲಾ ನೈಪುಣ್ಯ, ನೃತ್ಯಸಂಯೋಜನೆಯ ರಸಭಿಜ್ಞತೆ, ನೃತ್ಯಶಿಕ್ಷಣದ ವೈಶಿಷ್ಟ್ಯ ಎದ್ದು ಕಾಣುತ್ತಿದ್ದವು. ನೃತ್ಯ ಪಯಣದ ಹಾದಿಯಲ್ಲಿ ನೃತ್ಯ ಶಾಲೆಯೊಂದು ಉತ್ತಮ ನಾಟ್ಯಶಿಕ್ಷಣವನ್ನು ಬದ್ಧತೆಯಿಂದಧಾರೆಯೆರೆಯುತ್ತ, ನೃತ್ಯಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ವಹಿಸುವ ಪಾತ್ರ ಅಗಾಧ. ಈ ನಿಟ್ಟಿನಲ್ಲಿ ರಸಾನಂದ ನಾಟ್ಯಶಾಲೆಯು 22 ವರುಷಗಳ ಸಾರ್ಥಕ ಸೇವೆಯ ಸಂಭ್ರಮವನ್ನು ಆಚರಿಸುತ್ತಿರುವ ಸಂಗತಿ ನಿಜಕ್ಕೂ ಸ್ತುತ್ಯಾರ್ಹ.

ಗುರು ಪೂರ್ಣಿಮಾಮೋಹನರಾಂ ಅವರ ಹರಿತ ಶಿಕ್ಷಣದಲ್ಲಿರೂಪುಗೊಂಡ ಉದಯೋನ್ಮುಖ ಪ್ರತಿಭೆಗಳು ಸಾದರಪಡಿಸಿದನೃತ್ಯಗಳು ಬಹು ಅಚ್ಚುಕಟ್ಟಾಗಿದ್ದವು. ಪ್ರತಿಯೊಬ್ಬ ಶಿಷ್ಯರಿಗೂ ವೇದಿಕೆ ಒದಗಿಸಿದಪ್ರಸ್ತುತಿಯಶುಭಾರಂಭ ಪುಷ್ಪಾಂಜಲಿಯಿಂದಾಯಿತು.ತಿಲ್ಲಾಂಗ್‍ರಾಗದ ಪ್ರಭೋ ಗಣಪತಿ…ಯ ವೈಭವ ನರ್ತಕಿಯರ ಮೆರವಣಿಗೆಯ ದೃಶ್ಯ, ವಿವಿಧವಾದನಗಳ ನೃತ್ಯ ಸೇವೆಗಳಿಂದ ಕಂಗೊಳಿಸಿತು.

ಷಣ್ಮುಖಪ್ರಿಯರಾಗದ ಸುಬ್ರಹ್ಮಣ್ಯ ಕವಿತ್ವಂ ಕಲಾವಿದೆಯರ ನಡುವಣ ಅನುಪಮ ಸಾಮರಸ್ಯ,ಲವಲವಿಕೆಯ ನೃತ್ಯಲಾಸ್ಯ,ಅರೆಮಂಡಿ,ಜಾಮಿತ್ರಿಯ ವಿನ್ಯಾಸ, ನಾಟಕೀಯ ಸನ್ನಿವೇಶಗಳ ನಿರ್ಮಾಣದಿಂದ ಸೊಗಸೆನಿಸಿತು.

ಜತಿಸ್ವರದಲ್ಲಿ ಮೂಡಿಬಂದ ಅಂಗಶುದ್ಧಿ, ಅಡವುಗಳ ವಿಶಿಷ್ಟ ಜೋಡಣೆ,ಒಟ್ಟಾಗಿ ನಿನದಿಸಿz ನೂಪುರ ಝೇಂಕಾರ ಗಮನಾರ್ಹವಾದವು. ಸಮೂಹ ನೃತ್ಯದಲ್ಲಿ ಒಂದೇ ಬಗೆಯಲ್ಲಿ ಹಸ್ತ ಮತ್ತು ಪಾದಗಳ ಚಲನೆಯ ಶಿಸ್ತನ್ನು ಸಾಧಿಸುವುದು ಕಷ್ಟ. ಒಟ್ಟಂದ ಪಡೆದ ಜತಿಸ್ವರಗಳ ಖಾಚಿತ್ಯ ಆನಂದದಾಯಕವಾಗಿತ್ತು.
ಲಯ ಕವಿತೆಯನ್ನು ಅರ್ಥಪೂರ್ಣವಾಗಿ ನಿರೂಪಿಸಿದ ಗುರು ಪೂರ್ಣಿಮಾ ಅವರ ಸ್ಫುಟತ್ವ, ಸುಭಗತೆ,ಲಯವಾದ್ಯಗಳ ತಾಳದ ಝರಿಗೆ, ಮಿಂಚಿನ ಗತಿಗೆ, ಅನನ್ಯವಾಗಿ ನರ್ತಿಸಿದಕಲಾವಿದೆಯರ ನೃತ್ಯ ಸಾಮಥ್ರ್ಯಗಳಿಗೆಈ ಹೊಸಪ್ರಯೋಗನಿಜವಾಗಿಯೂ ಒರೆಗಲ್ಲಾಯಿತು.

ಗಾಯನದಲ್ಲಿ ಭಾರತಿ ವೇಣುಗೋಪಾಲ್, ಮೃದಂಗ-ವಿ.ಆರ್.ಚಂದ್ರಶೇಖರ್, ಪಿಟೀಲು-ಮಧುಸೂದನ್, ಕೊಳಲು-ಪ್ರಮುಖ್ ಮತ್ತು ರಿದಂಪ್ಯಾಡ್- ಪ್ರಸನ್ನಕುಮಾರ್ ಅವರ ಹಿಮ್ಮೇಳ ಸುಂದರ ಪ್ರಭಾವಳಿ ಒದಗಿಸಿತ್ತು.

ಅಂತ್ಯದಲ್ಲಿ ಜನಪ್ರಿಯವಾಗಿರುವ ಕೆರೆಗೆ ಹಾರ ಜಾನಪದ ನೃತ್ಯರೂಪಕ,ಕೋಲಾಟದವರಸೂತ್ರಧಾರಿಕೆಯಲ್ಲಿಸಾಗಿದ ನಾಟಕೀಯ ಸನ್ನಿವೇಶಗಳುಪರಿಣಾಮಕಾರಿಯಾಗಿದ್ದವು. ಮಲ್ಲನಗೌಡಕಟ್ಟಿಸಿದಕೆರೆಯಲ್ಲಿ ನೀರು ಬಾರದುದಕ್ಕೆ, ಅವನ ಮುಗ್ಧಸೊಸೆ ಭಾಗೀರಥಿಯಬಲಿದಾನವಾದ ಕಥೆ ನಿಜಕ್ಕೂ ಹೃದಯಂಗಮವಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ