ಡಿ. 30ರಂದು ಗೋಂಧಳಿ ಮತ್ತು ಬುಡಬುಡಿಕೆ ಸಮುದಾಯದವರಿಂದ ಬೃಹತ್ ಪ್ರತಿಭಟನೆ

ಬೆಂಗಳೂರು,ಡಿ.21- ಗೋಂಧಳಿ, ಬುಡಬುಡಿಕೆ ಸಮುದಾಯದವರನ್ನು ಹಲವು ವರ್ಷಗಳಿಂದ ಅವಮಾನಿಸಲಾಗುತ್ತಿದ್ದು, ಈ ವಿರುದ್ದ ನಗರದಲ್ಲಿ ಇದೇ 30ರಂದುಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಅಖಂಡ ಕರ್ನಾಟಕ ಗೋಂಧಳಿ ಸಮಾಜ ಸಂಘ ಮತ್ತು ಸಲಹಾ ಸಮಿತಿ ಅಧ್ಯಕ್ಷ ಡಾ.ಕೆ.ಎಂ.ಜಯರಾಮಯ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಿಂದ ಗೋಂಧಳಿ ಬಿಡುಗಡೆಗೆ ಜೋಷಿ ವಾಸುದೇವ ಸಮುದಾಯದವರು ಅಂದು ಬೆಂಗಳೂರಿಗೆ ಬಂದು ಬಹಳ ವರ್ಷಗಳಿಂದ ಆಗುತ್ತಿರುವ ಅವಮಾನ ವಿರುದ್ಧ ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ