ದಲಿತರ ಜಮೀನಿನ ಮೇಲೆ ದಬ್ಬಾಳಿಕೆ ನಡೆಸಿದ ಇಂಜಿನಿಯರ್ ಗಳನ್ನು ಸೇವೆಯಿಂದ ಅಮಾನತುಗೊಳಿಸುವಂತೆ ದಲಿತ ಸಂಘಟನೆಗಳ ಒತ್ತಾಯ

ಬೆಂಗಳೂರು,ಡಿ.20- ದಲಿತ ಮುಖಂಡರೊಬ್ಬರ ಜಮೀನಿನ ಮೇಲೆ ಅತಿಕ್ರಮಣ ಮಾಡಿ ದೌರ್ಜನ್ಯ ನಡೆಸಿರುವ ವಿಜ್ಞಾನನಗರ ವಾರ್ಡ್ ಬಿಬಿಎಂಪಿ ಇಂಜಿನಿಯರ್‍ಗಳನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಇಂದು ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿತು.

ಬಸವನಗರದಲ್ಲಿ ದಲಿತ ಮುಖಂಡ ಎಸ್.ಮನೋಹರ್‍ಗೆ ಸೇರಿದ ಜಮೀನಿದೆ. ಈ ಜಾಗದ ಮೇಲೆ ಅತಿಕ್ರಮಣ ಮಾಡಿದ ಇಂಜಿನಿಯರ್‍ಗಳಾದ ಮಲ್ಲಿಕಾರ್ಜುನ್, ರಘು ಎಂಬುವರು ಅಲ್ಲಿನ ಕಾಂಪೌಂಡ್ ಕೆಡವಿ ದೌರ್ಜನ್ಯ ನಡೆಸಿದ್ದಾರೆ.ಇದು ಅಕ್ಷಮ್ಯ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ರಾಜಕಾಲುವೆ ಬಫರ್‍ಜೋನ್ ನೆಪ ಹೇಳಿಕೊಂಡು ದಲಿತರ ಜಮೀನಿನವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇಂತಹ ದಲಿತ ವಿರೋಧಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ