ಕೇಂದ್ರ ಸಚಿವರಿಗೆ ಕಪಾಳಮೋಕ್ಷಮಾಡಿದ ಯುವಕ

ಥಾಣೆ: ಯುವಕನೊಬ್ಬ ಕೇಂದ್ರ ಸಚಿವ ರಾಮದಾಸ್​ ಅತವಾಲೆ ಅವರನ್ನು ಎಳೆದಾಡಿ, ಕಪಾಳಮೋಕ್ಷ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಅಂಬೇರ್​ನಾಥ್​ ಎಂಬಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅತವಾಲೆ ಅವರು ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿಯುತ್ತಲೇ ಅವರತ್ತ ನುಗ್ಗಿ ಬಂದ ಪ್ರವೀಣ್​ ಗೋಸಾವಿ ಎಂಬ ಯುವಕ ಅವರನ್ನು ಕೆಳಗೆ ತಳ್ಳಿದ್ದಾನೆ, ನಂತರ ಎಳೆದಾಡಿ ಕಪಾಳಕ್ಕೆ ಹೊಡೆದಿದ್ದಾನೆ.

ಸಚಿವರ ಮೇಲೆ ಹಲ್ಲೆ ನಡೆಯುತ್ತಲೇ ಅವರ ನೆರವಿಗೆ ಧಾವಿಸಿದ ಅವರ ಬೆಂಬಲಿಗರು ಮತ್ತು ಅಂಗರಕ್ಷಕರು, ಯುವಕನನ್ನು ಪಕ್ಕಕ್ಕೆ ಎಳೆದು ಬೀಳಿಸಿ, ಹೊಡೆದಿದ್ದಾರೆ. ನಂತರ ಅಂಗರಕ್ಷರು ಆತನನ್ನು ಕಾರ್ಯಕ್ರಮದಿಂದ ಹೊರಗೆ ಕರೆದೊಯ್ದಿದ್ದಾರೆ. ಆ ನಂತರರ ‘ಸಚಿವರ ಬೆಂಬಲಿಗರು ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಚಿವರ ಮೇಲೆ ಹಲ್ಲೆ ನಡೆಸಿದ ಯುವಕ ರಿಪಬ್ಲಿಕನ್​ ಪಾರ್ಟಿ ಆಫ್​ ಇಂಡಿಯಾದ (ಆರ್​ಪಿಐ) ಕಾರ್ಯಕರ್ತ ಎನ್ನಲಾಗಿದೆ. ಘಟನೆ ನಡೆಯುತ್ತಲೇ ವಿಚಲಿತರಾದ ಸಚಿವ ರಾಮದಾಸ್​ ಮುಂಬೈಗೆ ತೆರಳಿದರು.

Ramdas Athawale Allegedly Slapped, Pushed By Man In Maharashtra

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ