ನಗರದ ತುಳಸಿ ಉದ್ಯಾನವನದಲ್ಲಿ ನ.25ರಂದು ಕ್ವೀರ್ ಹಬ್ಬ

ಬೆಂಗಳೂರು,ನ.23- ನಮ್ಮ ಪ್ರೈಡ್ ಸಂಸ್ಥೆ ಸಿಎಸ್‍ಎಂಆರ್ ಜೊತೆ ಸೇರಿ ನ.25ರಂದು ನಗರದ ತುಳಸಿಪಾರ್ಕ್‍ನಲ್ಲಿ ನಮ್ಮ ಪ್ರೈಡ್ ಮತ್ತು ಕರ್ನಾಟಕ ಕ್ವೀರ್ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಎಸ್‍ಎಂಆರ್‍ನ ಮುಖ್ಯಸ್ಥ ಅನಿರುದ್ಧ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ನಮ್ಮ ಬಗ್ಗೆ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಲಾಗುವುದು. ಹಿಂಸೆ, ಅಪರಾಧ, ನಿಂದನೆ, ತಾರತಮ್ಯ, ಸಮುದಾಯದ ವಿರುದ್ಧ ನಡೆಯುವ ಕುಟುಂಬ ಮತ್ತು ಕೌಟುಂಬಿಕ ದೌರ್ಜನ್ಯಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ತಡೆಯಲು ಒತ್ತಾಯಿಸಲಾಗುವುದು ಎಂದು ಹೇಳಿದರು.

ನಮ್ಮನ್ನು ಮಂಗಳಮುಖಿಯರೆಂದು ನೋಡದೆ ನಮ್ಮನ್ನೂ ಮಹಿಳೆಯರೆಂದು ಪರಿಗಣಿಸಿ ಎಲ್ಲ ರೀತಿಯ ಸ್ಥಾನಮಾನ ನೀಡಬೇಕು ಹಾಗೂ ನಮ್ಮ ಸಮುದಾಯಕ್ಕೆ ಕಾಲೇಜುಗಳಲ್ಲಿ ಮತ್ತು ಮೆಡಿಕಲ್ ಇನ್ನಿತರೆ ಉನ್ನತ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡಬೇಕು, ನಮಗೆ ಉಚಿತವಾಗಿ ಚಿಕಿತ್ಸೆ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಕಾರ್ಯಕ್ರಮದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

ಸಿಎಸ್‍ಎಂಆರ್ ಸಂಸ್ಥೆ ಸದಸ್ಯರಾದ ರಿಯಾನ್, ಮೀನಾಕ್ಷಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ