ನಾಳೆಯಿಂದ ಆಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಜನವರಿ 15ರವರೆಗೆ ವಿವಿಧ ಕಾರ್ಯಕ್ರಮಗಳು:

ಬೆಂಗಳೂರು, ನ.16- ಕಲಾಸಿಪಾಳ್ಯದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಮಂಡಲ ಪೂಜೆ ಪ್ರಯುಕ್ತ ನಾಳೆಯಿಂದ ಜನವರಿ 15ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಡಿಸೆಂಬರ್ 22ರಂದು ಅಯ್ಯಪ್ಪ ಸ್ವಾಮಿಗೆ ಮಂಡಲಪೂಜೆ, ಅನ್ನದಾನ, ಪಾಲಗೋಳಿ ಮತ್ತು ರಥೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ನಾಳೆಯಿಂದ ಜನವರಿ 15ರವರೆಗೆ ಪ್ರತಿ ದಿನ ಪೂಜಾ ಕಾರ್ಯಗಳು ನಡೆಯಲಿದೆ. ನಿನ್ನೆ ಸಂಜೆ 7ರಿಂದ 9 ಗಂಟೆವರೆಗೆ ಭಜನಾ ಕಾರ್ಯಕ್ರಮವಿರುತ್ತದೆ ಎಂದು ದೇವಾಸ್ಥಾನದ ಪ್ರಧಾನ ಅರ್ಚಕರಾದ ಕುಮಾರಸ್ವಾಮಿ ತಿಳಿಸಿದ್ದಾರೆ.

ಜನವರಿ 14ರಂದು ಸ್ವಾಮಿಗೆ ತುಪ್ಪದ ಅಭಿಷೇಕವಿದ್ದು, ಅಂದು ಬೆಳಗ್ಗೆ 5ರಿಂದ ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕರಿಗೆ ಅಭಿಷೇಕ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಮಕರ ಜ್ಯೋತಿ ಬೆಳಕು ದಿನ ಮಕರ ಸಂಕ್ರಾಂತಿ ಕರ್ಪೂರ ದಿವ್ಯ ಜ್ಯೋತಿ ದರ್ಶನವಿರುತ್ತದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತರು ಭಾಗವಹಿಸಬೇಕೆಂದು ಅವರು ವಿನಂತಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ