ನ.17 ಮತ್ತು 18ರಂದು ಇಪ್ಪತ್ಮೂರನೆ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಬೃಹತ್ ಸಮಾವೇಶ

ಬೆಂಗಳೂರು, ನ.11- ಇಪ್ಪತ್ಮೂರನೆ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಬೃಹತ್ ಸಮಾವೇಶ ಇದೇ 17 ಮತ್ತು 18ರಂದು ಶೃಂಗೇರಿಯ ರಾಜನಗರದಲ್ಲಿರುವ ವಿದ್ಯಾಭಾರತಿ ಸಭಾವನದಲ್ಲಿ ಆಯೋಜಿಸಲಾಗಿದೆ.

ಬೆಂಗಳೂರಿನ ಸಪ್ತಪದಿ ಪೌಂಡೇಶನ್, ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ, ಮೈಸೂರಿನ ಬ್ರಾಹ್ಮಣ ಸ್ವಯಂ ಸೇವಕ ಸಂಘದ ಸಹಯೋಗದಲ್ಲಿ ಎರಡು ದಿನಗಳ ಕಾಲ ಬೆಳಗ್ಗೆ 10 ಗಂಟೆಗೆ ಸಮಾವೇಶ ಹಮ್ಮಿಕೊಂಡಿದ್ದು, ವಧು-ವರ, ವಿಚ್ಚೇದಿತರು, ವಿಶೇಷ ಚೇತನರು, ವಿಧವೆ, ವಿಧುರರು ಭಾಗವಹಿಸಬಹುದು.
ಹೆಣ್ಣುಮಕ್ಕಳು ಹಾಗೂ ವಿಶೇಷ ಚೇತನರು ವಾಟ್ಸ್‍ಆಪ್ ಮೂಲಕ ಜಾತಕ ಹಾಗೂ ಫೆÇೀಟೋವನ್ನು ಕಳುಹಿಸಬಹುದಾಗಿದ್ದು, ವಾಟ್ಸ್‍ಆಪ್ ನಂ.9449425536ಗೆ ಕಳುಹಿಸುವಂತೆ ಕೋರಲಾಗಿದೆ.

ಸಮಾವೇಶದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ನ.12ರಿಂದ 16ರೊಳಗೆ ಇತ್ತೀಚಿನ ಎರಡು ಪಾಸ್‍ಪೆÇೀರ್ಟ್ ಫೆÇೀಟೋ ಹಾಗೂ ಜಾತಕದೊಂದಿಗೆ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಕಾರ್ಯಕ್ರಮ ಆಯೋಜಕರಾದ ಮಂಗಳಸೂತ್ರ ಶ್ರೀನಿವಾಸ್, ಮೊಬೈಲ್ 9449425536/38ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ