ಶ್ರೀ ಮಣಿಕಂಟ ಮಹೋತ್ಸವದ ಬೆಳ್ಳಿ ಹಬ್ಬ, ನಟ ಶಿವರಾಜ್ ಕುಮಾರ್ ಅವರಿಂದ ರಥಯಾತ್ರಗೆ ಚಾಲನೆ

ಬೆಂಗಳೂರು, ಅ.30- ಅಖಿಲ ಕರ್ನಾಟಕ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ವತಿಯಿಂದ 25ನೆ ವರ್ಷದ ಅಯ್ಯಪ್ಪ ಸ್ವಾಮಿ ಪೂಜೆಯ ಅಂಗವಾಗಿ ಶ್ರೀ ಮಣಿಕಂಠ ಮಹೋತ್ಸವ ಬೆಳ್ಳಿ ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ 2 ತಿಂಗಳ ಕಾಲ ನಡೆಯಲಿರುವ ರಥಯಾತ್ರೆಗೆ ನಾಳೆ ಬೆಳಗ್ಗೆ 9 ಗಂಟೆಗೆ ಚಾಲನೆ ದೊರೆಯಲಿದೆ.

ಚಲನಚಿತ್ರ ನಟ ಡಾ.ಶಿವರಾಜ್‍ಕುಮಾರ್ ಅವರು ಜಾಲಹಳ್ಳಿಯ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲ ಆವರಣದಲ್ಲಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಎರಡು ತಿಂಗಳ ಕಾಲ ನಡೆಯುವ ರಥಯಾತ್ರೆಯಲ್ಲಿ ಶಬರಿ ಮಲೆ ಅಯ್ಯಪ್ಪ ಸ್ವಾಮಿ ಚರಿತ್ರೆ , ವಿಧಿ ವಿಧಾನಗಳ ಕುರಿತು ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.

ನಾಳಿನ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಕೆ.ಶಿವರಾಂ, ಚಲನಚಿತ್ರ ನಿರ್ಮಾಪಕ ಅಶ್ವಿನಿ ರಾಮಪ್ರಸಾದ್, ಸಂಘದ ಅಧ್ಯಕ್ಷ ವೀರೇಶ್ ಕಲಾದಗಿ, ಗಂಧರ್ವ ಮಂಜು, ಶಬರಿಮಲೈ ಅಯ್ಯಪ್ಪ ಸೇವಾ ಸಮಾಜದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ