ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ದೂರು: ಸಾಕ್ಷಿದಾರರಿಗೆ ನೋಟಿಸ್ ಜಾರಿ

ಬೆಂಗಳೂರು, ಅ.28- ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ದೂರು ನೀಡಿರುವ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿರುವ ಕಬ್ಬನ್ ಪಾರ್ಕ್ ಪೆÇಲೀಸರು, ಸಾಕ್ಷಿದಾರರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ನಾಳೆ ಸಾಕ್ಷಿದಾರರು ಠಾಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ನೋಟಿಸ್‍ನಲ್ಲಿ ತಿಳಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.
ವಿಸ್ಮಯ ಚಿತ್ರೀಕರಣದ ವೇಳೆ ಅರ್ಜುನ್ ಸರ್ಜಾ ನಡವಳಿಕೆ ಕುರಿತು ನಾನು ಆಪ್ತ ಸಹಾಯಕರಾದ ಬೋರೇಗೌಡ, ಕಿರಣ್, ಸ್ನೇಹಿತೆ ಯಶಸ್ವಿನಿ, ಸಹ ನಿರ್ದೇಶಕ ಭರತ್ ನೀಲಕಂಠ, ಸಹ ನಿರ್ದೇಶಕಿ ಮೋನಿಕಾ ಅವರೊಂದಿಗೆ ಹೇಳಿಕೊಂಡಿದ್ದೆ ಎಂದು ನಿನ್ನೆ ಶೃತಿ ಹರಿಹರನ್ ಕಬ್ಬನ್ ಪಾರ್ಕ್ ಪೆÇಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.

ನಿನ್ನೆ ಶೃತಿ ಹರಿಹರನ್ ದೂರು ನೀಡಿದ ನಂತರ ತೀವ್ರ ತನಿಖೆ ಕೈಗೊಂಡ ಕಬ್ಬನ್ ಪಾರ್ಕ್ ಪೆÇಲೀಸರು, ದೂರಿನಲ್ಲಿ ನೀಡಿರುವ ಸ್ಥಳಗಳ ಪರಿಶೀಲನೆ ಆರಂಭಿಸಿದ್ದಾರೆ.
ಸ್ಥಳ ಪರಿಶೀಲನೆಯ ನಂತರ ಸಾಕ್ಷಿದಾರರಿಂದ ಹೇಳಿಕೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ