ಉಪಚುನಾವಣೆ: ಶಿವಮೊಗ್ಗದಿಂದ ಬಿ ವೈ ರಾಘವೇದ್ರ ಹಾಗೂ ರಾಮನಗರದಿಂದ ಚಂದ್ರಶೇಖರ್ ನಾಮಪತ್ರ ಸಲ್ಲಿಕೆ

ಶಿವಮೊಗ್ಗ/ ರಾಮನಗರ: ಶಿವಮೊಗ್ಗ ಉಪ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪುತ್ರ ಬಿ.ವೈ ರಾಘವೇಂದ್ರ ಇಂದು ನಾಮ ಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮೊದಲು ಬಿಎಸ್​ ಯಡಿಯೂರಪ್ಪ ಕುಟುಂಬಸ್ಥರು ರಾಘವೇಂದ್ರ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಇದಕ್ಕೂ ಮೊದಲು ರಾಘವೇಂದ್ರ ಅವರು ಪತ್ನಿ ಸಹಿತ ಈಶ್ವರನ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸದರು. ನಂತರ ರವೀಂದ್ರ ನಗರದ ಗಣಪತಿ ದೇಗುಲಕ್ಕೆ ಭೇಟಿ ನೀಡಿದರು.

ಅಭ್ಯರ್ಥಿ ರಾಘವೇಂದ್ರ ಅವರೊಂದಿಗೆ ಕ್ಷೇತ್ರ ಉಸ್ತುವಾರಿ ಕೆ.ಎಸ್.ಈಶ್ವರಪ್ಪ, ಶಾಸಕ ಹರತಾಳು ಹಾಲಪ್ಪ, ಎಂ.ಬಿ.ಭಾನುಪ್ರಕಾಶ್, ರಾಘವೇಂದ್ರ ಪತ್ನಿ ತೇಜಸ್ವಿನಿ ಸೇರಿದಂತೆ ಕುಟುಂಬ ಉಪಸ್ಥಿತರಿದ್ದರು.

ರಾಮನಗರ ವಿಧಾನಸಭೆ ಉಪ ಚುನಾವಣೆಗೆ ಬಿಜೆಪಿಯಿಂದ ಚಂದ್ರಶೇಖರ್ ಲಿಂಗಪ್ಪ ಇಂದು ರಾಮನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಈ ವೇಳೆ ಮಾಜಿ ಡಿಸಿಎಂ ಆರ್ ಅಶೋಕ, ಮಾಜಿ ಸಚಿವ ಸಿ,ಪಿ ಯೋಗೇಶ್ವರ್ ಸಂಸದ ಪಿ,ಸಿ ಮೋಹನ್ ಮತ್ತಿತರರು ಸಾಥ್ ನೀಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ