ನಡಿಗೆದಾರರ ಸಂಘದಿಂದ ಸೈಕಲ್ ಡೇ

ಬೆಂಗಳೂರು, ಅ.6- ಪರಿಸರ ಜಾಗೃತಿ ಸೇರಿದಂತೆ ಆರೋಗ್ಯ ಹಾಗೂ ಮಕ್ಕಳಿಗೆ ಕ್ರೀಡಾ ಮನೋಭಾವ ಅಗತ್ಯವಿರುವುದನ್ನು ಮನಗಂಡು ಸಂಗೊಳ್ಳಿ ರಾಯಣ್ಣ ಉದ್ಯಾನವನದ ನಡಿಗೆದಾರರ ಹಾಗೂ ಸುಬ್ರಹ್ಮಣ್ಯ ನಗರ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಜಂಟಿಯಾಗಿ ಸೈಕಲ್ ಡೇ ಆಯೋಜಿಸಿದೆ.
ನಾಳೆ ಸುಬ್ರಹ್ಮಣ್ಯನಗರದ ಸಂಗೊಳ್ಳಿ ರಾಯಣ್ಣ ಉದ್ಯಾನವನದಲ್ಲಿ ಬೆಳಗ್ಗೆ 7 ರಿಂದ 10ರ ವರೆಗೆ ಸೈಕಲ್ ಡೇ ಅಂಗವಾಗಿ ನಗರದ ನಾಗರಿಕರಿಗೆ ವಿವಿಧ ಆಟೋಟಗಳನ್ನು ಏರ್ಪಡಿಸಲಾಗಿದ್ದು, ಉಚಿತ ನೋಂದಣಿ ಇದೆ.

ಸೈಕಲ್ ಸವಾರಿ, ವಿವಿಧ ಆಟೋಟಗಳು, ಕಲೆ, ಸಾಂಸ್ಕøತಿಕ ಹಬ್ಬ ಸೇರಿದಂತೆ ರಂಗ ಚಟುವಟಿಕೆಗಳು, ಇನ್ನಿತರ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸುಮಾರು 200ಕ್ಕೂ ಹೆಚ್ಚು ಯುವಕರು ಹಾಗೂ ಸುಬ್ರಹ್ಮಣ್ಯ ನಗರದ ನಾಗರಿಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸಂಘದ ಅಧ್ಯಕ್ಷ ಕೆ.ಎಂ.ಗೋಪಾಲಸ್ವಾಮಿ ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ