
ನವದೆಹಲಿ: ಹಿಂಗಾರು ಬೆಳೆಗಳಿಗೆ ನೀಡುವ ಬೆಂಬಲ ಬೆಲೆಯನ್ನು ಏರಿಕೆ ಮಾಡಲು ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಗೋಧಿಗೆ ಪ್ರತಿ ಕ್ವಿಂಟಾಲ್ ಗೆ ನೀಡಲಾಗುತ್ತಿದ್ದ ಬೆಂಬಲ ಬೆಲೆಯನ್ನು 1,840 ರೂಪಾಯಿಗೆ ನಿಗದಿಪಡಿಸಲಾಗಿದೆ. ಕಳೆದ ವರ್ಷದ ಕನಿಷ್ಟ ಬೆಂಬಲ ಬೆಲೆಗೆ ಹೋಲಿಕೆ ಮಾಡಿದರೆ ಈ ಬಾರಿ ಪ್ರತಿ ಕ್ವಿಂಟಾಲ್ ಗೋಧಿಗೆ 105 ರೂಪಾಯಿ ಏರಿಕೆ ಮಾಡಲಾಗಿದ್ದರೆ, ಸ್ಯಾಫ್ಲವರ್ ಗೆ 845 ರೂಪಾಯಿ, ರಾಪ್ಸೀಡ್ ಮತ್ತು ಸಾಸಿವೆಗಳಿಗೆ ರೂಪಾಯಿ 200, ಬಾರ್ಲಿಗೆ 30 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
ಈ ಕುರಿತು ಕೇಂದ್ರ ಸಚಿವ ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್ ಮಾಹಿತಿ ನೀಡಿದ್ದು, ಗೋಧಿ ಬೆಳೆಗೆ ಏರಿಕೆ ಮಾಡಲಾಗಿರುವ ಬೆಂಬಲ ಬೆಲೆ ರೈತರಿಗೆ ಶೇ.112.5 ರಷ್ಟು ಲಾಭ ತರಲಿದೆ ಎಂದಿದ್ದಾರೆ.