ರೈಲ್ವೆ ಸಲಹಾ ಸಮಿತಿ ಸದಸ್ಯರಾಗಿ ಜಯಂತ್ ಹಾಗೂ ಶಿವಕುಮಾರ್ ನೇಮಕ: ಅಭಿನಂದನೆಗಳ ಮಹಾಪೂರ

ಬೆಂಗಳೂರು: ನೈಋತ್ಯ ವಲಯದ ವಲಯ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸದಸ್ಯರನ್ನಾಗಿ ಜಯಂತ್ ಮುರುಗೇಂದ್ರ ಸ್ವಾಮಿ ಹಾಗೂ ಬೆಂಗಳೂರು ವಿಭಾಗೀಯ ರೈಲು ಬಳಕೆದಾರರ ಸಲಹಾ ಸಮಿತಿಗೆ ಶಿವಕುಮಾರ್ ಸುಬ್ರಹ್ಮಣ್ಯನ್ ಅವರನ್ನು ನೇಮಕಮಾಡಲಾಗಿದೆ.

ಜಯಂತ್ ನೇಮಕದ ಕುರಿತು ಹುಬ್ಬಳ್ಳಿಯ ರೈಲ್ವೆ ವಲಯದ ವ್ಯವಸ್ಥಾಪಕರಾದ ಈ.ವಿಜಯ್ ಅಧಿಕೃತ ಆದೇಶ ನೀಡಿದ್ದು, ಜಯಂತ್ ಅವರ ಕಾಲಾವಧಿ 31.08.2020ರವರೆಗೆ ಚಾಲ್ತಿಯಲ್ಲಿರುತ್ತದೆ.

ಇನ್ನು ಬೆಂಗಳೂರು ವಿಭಾಗೀಯ ರೈಲು ಬಳಕೆದಾರರ ಸಲಹಾ ಸಮಿತಿಗೆ ಶಿವಕುಮಾರ್ ಸುಬ್ರಹ್ಮಣ್ಯನ್ ನೇಮಕಗೊಂಡಿದ್ದು, ಶಿವಕುಮಾರ್ ನೇಮಕಾತಿ ಕಾಲಾವಧಿ 30.09.2019ರ ವರೆಗೆ ಚಾಲ್ತಿಯಲ್ಲಿರುತ್ತದೆ. ಈ ಬಗ್ಗೆ ಬೆಂಗಳೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಆದೇಶ ನೀಡಿದ್ದಾರೆ.

ಜಯಂತ್ ಮುರುಗೇಂದ್ರ ಸ್ವಾಮಿ ಹಾಗೂ ಶಿವಕುಮಾರ್ ಸುಬ್ರಹ್ಮಣ್ಯನ್ ರಾಜ್ಯ ಬಿಜೆಪಿ ಮಾಧ್ಯಮ ವಿಭಾಗದಲ್ಲಿ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸ್ನೇಹಪರ ವ್ಯಕ್ತಿತ್ವ ಹೊಂದಿರುವ ಇಬ್ಬರೂ ಪಕ್ಷದಲ್ಲಿಯೂ ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಭವಿಷ್ಯದಲ್ಲಿ ಉತ್ತಮ ಕಾರ್ಯನಿರ್ವಹಿಸುವ ಭರವಸೆ ಹೊಂದಿರುವುದಾಗಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ