ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಚುನಾವಣೆ: ಅಮೃತರಾಜ್, ಮಲ್ಲಪ್ಪ ನೇತೃತ್ವದ ತಂಡ ಜಯ

ಬೆಂಗಳೂರು,ಅ.1- ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಮೃತರಾಜ್ ಮತ್ತು ಮಲ್ಲಪ್ಪ ನೇತೃತ್ವದ ತಂಡ ಭರ್ಜರಿ ಜಯ ಗಳಿಸಿದೆ.

ಪಾಲಿಕೆ ಗಾಜಿನ ಮನೆಯಲ್ಲಿ ನಿನ್ನೆ ನಡೆದ ಚುನಾವಣೆಯಲ್ಲಿ ಅಮೃತರಾಜ್, ಅಶ್ವಥ್, ಎಚ್.ಬಿ.ಗಂಗಾಧರ್, ಡಿ.ಧರ್ಮರಾಯ, ನರಸಿಂಹ, ನಲ್ಲಪ್ಪ, ನಂಜಪ್ಪ , ಭಾಸ್ಕರ್, ಮಂಜುನಾಥ್, ಮಂಜೇಗೌಡ, ರವಿ, ರಾಮಚಂದ್ರ, ರೇಣುಕಾಂಬ, ವಿಭಾ, ಸುರೇಶ್, ಸೂರ್ಯಕುಮಾರಿ, ಸಂತೋಷ್‍ಕುಮಾರ್, ನಾಯಕ್ ಅವರುಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಕಳೆದ ಒಂದೂವರೆ ವರ್ಷದ ಹಿಂದೆ ಸಹಕರ ಸಂಘದ ನಿಯಮಗಳ ಪ್ರಕಾರ ರಚನೆಯಾಗಿದ್ದ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಅಮೃತರಾಜ್ ಕಾರ್ಯ ನಿರ್ವಹಿಸಿದ್ದರು.

ಪ್ರಜಾಪ್ರಭುತ್ವದಲ್ಲಿ ಚುನಾವಣೆಯಿಂದ ಮಾತ್ರ ಸದಸ್ಯರನ್ನು ಆಯ್ಕೆ ಮಾಡಬೇಕು ಎಂಬ ನಿಯಮದ ಅನ್ವಯ ನಿನ್ನೆ ಚುನಾವಣೆ ನಡೆಸಲಾಗಿದ್ದು, ನನ್ನ ನೇತೃತ್ವದ 17 ಸದಸ್ಯರು ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ ಎಂದು ಅಮೃತರಾಜ್ ತಿಳಿಸಿದರು.

ಇಂಜಿನಿಯರ್‍ಗಳ ಮೇಲೆ ನಡೆಯುವ ಹಲ್ಲೆ, ನೌಕರರ ಅಮಾನತು ವಿರುದ್ಧ ಹೋರಾಟ ನಡೆಸುವುದು, ಬಿಬಿಎಂಪಿ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಶಿಬಿರ, ನಾಗರಿಕರೊಂದಿಗೆ ಉತ್ತಮ ಬಾಂಧವ್ಯ, ಜನಪ್ರತಿನಿಧಿಗಳ ಸಹಕಾರದೊಂದಿಗೆ ನಮ್ಮ ಸಂಘ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಅಮೃತರಾಜ್ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅವರು ತಮ್ಮ ನೇತೃತ್ವದ ತಂಡದ ಸದಸ್ಯರನ್ನು ಆರಿಸಿದ ನೌಕರ ವರ್ಗಕ್ಕೆ ಕೃತಜ್ಞತೆ ಸಲ್ಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ